ಬಯಲುರಂಗ ಮಂದಿರ ನಿರ್ಮಾಣಕಾಮಗಾರಿಗೆ ಚಾಲನೆ: ಶಾಸಕ ಡಿ.ಎಮ್.ಐಹೊಳೆ
Construction work for open-air theatre inaugurated: MLA D.M. Aihole
ಬಯಲುರಂಗ ಮಂದಿರ ನಿರ್ಮಾಣಕಾಮಗಾರಿಗೆ ಚಾಲನೆ: ಶಾಸಕ ಡಿ.ಎಮ್.ಐಹೊಳೆ
ರಾಯಬಾಗ 31: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಹಾಗೂ ಶಾಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಯಲುರಂಗ ಮಂದಿರ ಅವಶ್ಯ ಇರುವುದರಿಂದ ಪಟ್ಟಣದಕೇಂದ್ರ ಶಾಲೆಯಲ್ಲಿ ಬಯಲುರಂಗ ಮಂದಿರ ನಿರ್ಮಿಸಲು ಅನುದಾನ ಮಂಜೂರು ಮಾಡಿಸಿರುವುದಾಗಿ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಶನಿವಾರ ಪಟ್ಟಣದ ತಾಲೂಕಾ ಶಾಲೆಯ ಆವರಣದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 15ಲಕ್ಷ ರೂ.ಅನುದಾನದಲ್ಲಿ ಬಯಲುರಂಗ ಮಂದಿರ ನಿರ್ಮಾಣಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆಯ ಬಯಲುರಂಗ ಮಂದಿರ ಜಾಗದಲ್ಲಿ ಈಗ ಹೊಸ ಬಯಲುರಂಗ ಮಂದಿರ ನಿರ್ಮಿಸಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಶಾಲೆಯಲ್ಲಿ ನಡೆಯುವ ಪ್ರತಿಭಾಕಾರಂಜಿ ಮತ್ತ ಸಾಂಸ್ಕೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮ ನಡೆಸಲು ಒಂದು ಉತ್ತಮ ವೇದಿಕೆ ಅವಶ್ಯಕವಾಗಿತ್ತು ಎಂದರು.
ಎಇಇ ಎಸ್.ಎಸ್.ಹೊಸಮನಿ,ದೈಹಿಕ ಪರೀವೀಕ್ಷಕ ಎಮ್.ಪಿ.ಜಿರಗ್ಯಾಳ, ಮುಖ್ಯ ಶಿಕ್ಷಕಿ ಎಮ್.ಬಿ.ಪಟ್ಟಣ,ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಜಿಯಾವುಲ್ಲಾ ಮುಲ್ಲಾ, ಎಮ್.ಆರ್.ಸಯ್ಯದ, ಸುರೇಶ ಮಾಳಿ, ಸುಭಾಷ್ ಕಾಂಬಳೆ, ಪರಶುರಾಮ ಪೂಜಾರಿ, ರಾಕೇಶಕಟ್ಟಿಮನಿ, ರಿತೇಶ ಅವಳೆ, ಭಾರತಿಲೋಹಾರ, ಅನಿಲ ಕೊರವಿ, ಮಹೇಶ ಕುಲಗುಡೆ, ಅಜೀತಜಾಧವ, ಅದಂ ಪಠಾಣ, ಆರ್.ಟಿಅರಬಳ್ಳಿ ಹಾಗೂ ಶಿಕ್ಷಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 