ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಸಮಾರೋಪ, ಯುಕ್ತಿ, ಭಕ್ತಿ, ಶಕ್ತಿ, ಈ ಮೂರರಿಂದ ಮುಕ್ತಿ ಸಾಧ್ಯ

Conclusion of Panchakalyana Pratistha Mahamahotsava, Yukti, Bhakti, Shakti, Mukti is possible throu

ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಸಮಾರೋಪ, ಯುಕ್ತಿ, ಭಕ್ತಿ, ಶಕ್ತಿ, ಈ ಮೂರರಿಂದ ಮುಕ್ತಿ ಸಾಧ್ಯ 

ಖಾನಾಪೂರ 09: ಧರ್ಮ ಮಾಧ್ಯಮದಿಂದ ಮೋಕ್ಷ ಪ್ರಾಪ್ತಿ ಸಾಧ್ಯ ಯುಕ್ತಿ ಭಕ್ತಿ ಶಕ್ತಿ, ಈ ಮೂರು ಇದ್ದರೆ ಮುಕ್ತಿ ನಿಶ್ವಿತ ಎಂದು ಧರ್ಮಕೇಸರಿ ಆಚಾರ್ಯ ಶ್ರೀ 108 ಜಿನಸೇನ ಮುನಿ ಮಹಾರಾಜರು ಹೇಳಿದರು, 

ಅವರು ಅವರು ರವಿವಾರ ದಿ, 9 ರಂದು ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಪಂಚಕ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ  

ಶ್ರಾವಕಿಯರು ಇಂದು ಮಕ್ಕಳನ್ನು ಬಸದಿಗಳಿಗೆ ಕಳುಹಿಸಿಕೊಟ್ಟು ಜೈನ ಧರ್ಮದ ಆಚಾರ-ವಿಚಾರ ಹಾಗೂ ಪರಂಪರೆಗಳನ್ನು ತಿಳಿಸಬೇಕು ಆತ್ಮಕಲ್ಯಾಣಕ್ಕಾಗಿ ಭಗವಂತನ ದರ್ಶನ ಪಡೆದು ಆತ್ಮದಲ್ಲಿ ಪರಮಾತ್ಮನನ್ನು ಕಾಣಬೇಕು ಪಾರ್ಶ್ವನಾಥರಿದ್ದಲ್ಲಿ ಕಷ್ಟಗಳು ಸಹಜ ಆದರೆ ಆ ಕಷ್ಟಗಳನ್ನು ತೊರೆದು ಭಗವಂತರ ಭಕ್ತಿಯಲ್ಲಿ ಲೀನರಾದಾಗ ಆತ್ಮ ಶುದ್ದಿ ಸಾಧ್ಯ ತನು,ಮನ,ಧನದಿಂದ ಮಾಡಿರುವ ಈ ಪಂಚಕ್ಯಾಣ ಮಹಾ ಮಹೋತ್ಸವವು ಸಾರ್ಥಕತೆಯನ್ನು ಕಂಡಿದ್ದು  ಗರ್ಭಕಲ್ಯಾದಿಂದ ಮೋಕ್ಷ ಕಲ್ಯಾಣದವರೆಗೆ ಕಾರ್ಯಕ್ರಮ ನಡೆದಿದ್ದು ಸಂಸಾರದಲ್ಲಿಲ್ಲದ ಸುಖ ಮುಕ್ತಿಯಲ್ಲಿದೆ ಎಂದರು, 

ಈ ಸಂದರ್ಭದಲ್ಲಿ ಸಂಸದೆ ಕುಽಽಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಕಾರ್ಯಕ್ರಮ ಮಾನವನ ಕುಲದ ಒಳಿತಿಗಾಗಿ ಮಾಡುತಿದ್ದು ಜೈನ ಧರ್ಮದ ಪರಂಪರೆಯನ್ನು ಇಂದಿನ ಯುವಕರು ಮುನ್ನಡೆಸಿಕೊಂಡು ಹೊಗಬೇಕು ಮಹಿಳೆಯರು ತಮ್ಮ ಮಕ್ಕಳಿಗೆ ಸ್ವಚಾರಿತ್ರ್ಯವುಳ್ಳ ಸದ್ವಿಚಾರಗಳನ್ನು ಪರಿಮಾಲನೆ ಮಾಡಿಸಿ ಧರ್ಮಾಚರಣೆಯತ್ತ ಅನಿಯಾಗುವಂತೆ ಮಾಡಬೇಕೆಂದರು ಯಾವುದೇ ಧರ್ಮಾಚರಣೆಗಳಿಗೆ ಸೇವೆ ಮಾಡಲು ಸದಾ ಸಿದ್ದರಿರುವುದಾಗಿ ತಿಳಿಸಿದರು, 

ಕೊನೆಯಲ್ಲಿ ಜೈನ ಸಮಾಜದ ಕ್ರಸ್ಟ ಕಮೀಟಿಯ ಅಧ್ಯಕ್ಷರು ಗ್ರಾ,ಪಂ,ಅಧ್ಯಕ್ಷ ಚಂದ್ರಕಾಂತ ಪಾಟೀಲ, ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಜೈನ ಧರ್ಮ ಉಳಿದಿದ್ದರೆ ಇಂದು ತಾಯಂದಿರರಿಂದ ಉಳಿದಿದೆ ಪಂಚಕಲ್ಯಾಣ ಮಹಾ ಮಹೋತ್ಸವದಿಂದ ಧರ್ಮಾಚರಣೆಯ ಬಗ್ಗೆ ಮಕ್ಕಳಿಗೆ ಸಂಸ್ಕಾರಗಳನ್ನು ಮುಜಿ ಮಹಾರಾಜರು ಧಾರೆಯೆರೆದಿದ್ದು ಸಮಸ್ತರಲ್ಲಿ ಧರ್ಮ ಜಾಗೃತಿಯಾಗಿದ್ದು ತಾಯಂದಿರರು ಮಕ್ಕಳನ್ನು ಜೈನ ಮಂದಿರಗಳಿಗೆ ಕಳುಹಿಸುವ ಕಾರ್ಯ ನಡೆಯಬೇಕು ಎಂದ ಅವರು ನಾನು ಎಂಬ ಅಹಂಕಾರ ತೊರೆದಾಗ ಮುಕ್ತಿ ಪ್ರಾಪ್ತಿಯಾಗಲು ಸಾಧ್ಯ ಜೈನ ಧರ್ಮದ ಆಚರಣೆ-ಪಾಲನೆ ಇಂದು ಅನಿವಾರ್ಯವಾಗಿದ್ದು ಎಲ್ಲರೂ ಧರ್ಮದ ರಕ್ಷಣೆ ಮಾಡುವಂತೆ ಕರೆಯಿತ್ತರು, 

  ವೇದಿಕೆಯಲ್ಲಿ ಕ್ಷುಲಕ ಜಯಸೇನ ಮಹಾರಾಜ, 105 ನಿರಮೋಹಿನಿಮತಿ ಮಾತಾಜಿ, 105 ನಿರಲೋಭಿಮತಿ ಮಾತಾಜಿ, 105 ನಿರದೋಷಿಮತಿ ಮಾತಾಜಿ, 105 ನಿಸ್ಸಂಗಮತಿ ಮಾತಾಜಿ, ಮುಂತಾದ ಮುನಿಗಳು ಹಾಗೂ ಮಾತಾಜಿಯವರು ವೇದಿಕೆಯಲ್ಲಿದ್ದರು, ಹಾಗೂ ಪವನ ಚಂದರ ಉಪಾಧ್ಯೆ, ಜೀನೇಂದ್ರ ಶ್ರೀಕಾಂತ ಉಪಾಧ್ಯ, ವೃಷಭ ಉಪಾಧ್ಯೆ, ಮಹಾವೀರ ಉಪಾಧ್ಯೆ, ವೇದಿಕೆಯಲ್ಲಿ ಹಣಮಂತಗೌಡಾ ಪಾಟೀಲ, ಶಾಂತಿನಾಥ ಪಾಟೀಲ, ಅಣ್ಣಾಗೌಡಾ ಪಾಟೀಲ, ಶ್ರೀಮತಿ ಅಂಜನಾ ಗೋಟೂರೆ, ಜಿನದತ್ತ ಪಾಟೀಲ, ಮಾತನಾಡಿದರು, ವೇದಿಕೆಯಲ್ಲಿ ನಿದೇಶಕ ಚೇತನ ಪಾಟೀಲ, ರಾಜು ಅವಟೆ,  ಮುಂತಾದವರುಜೈನ ಸಮಾಜದ ಟ್ರಸ್ಟ ಕಮೀಟಿಯ ಸರ್ವ ಸದಸ್ಯರು ಯುವಗ್ರುಫ್‌ನ ಸದಸ್ಯರು, ಸಮಸ್ತ-ಶ್ರಾವಕ,ಶ್ರಾವಕಿಯರು ಉಪಸ್ಥಿರತಿದ್ದರು.