ಕಾಲಮಿತಿಯಲ್ಲಿ ಎಲ್ಲ ಕಾಮಗಾರಿಗಳ ಪೂರ್ಣಗೊಳಿಸಿ: ಬಸವರಾಜ ಅಡವಿಮಠ

ಕಾಲಮಿತಿಯಲ್ಲಿ ಎಲ್ಲ ಕಾಮಗಾರಿಗಳ ಪೂರ್ಣಗೊಳಿಸಿ: ಬಸವರಾಜ ಅಡವಿಮಠ  Complete all works within the time limit: Basavaraja Adavimath


ಕಾಗವಾಡ, 19 : ತಾ.ಪಂ. ಲಿಂಕ್ ಡಾಕುಮೆಂಟ್, ಅನಿಭಂರ್ದಿತ ಅನುದಾನ, 15 ನೇ ಹಣಕಾಸು, ಎಸ್‌ಬಿಎಂ, ನರೇಗಾ ಸೇರಿದಂತೆ ಎಲ್ಲ ಯೋಜನೆಗಳ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಅವರು, ಸೋಮವಾರ ದಿ. 19 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ 2024-25 ನೇ ಸಾಲಿನ ಜಮಾಬಂಧಿ ಸಭೆಯಲ್ಲಿ ಮಾತನಾಡುತ್ತಿದ್ದರು. ನಾಳೆ ನಡೆಯುವ ಕರ ವಸೂಲಾತಿ ಮೇಗಾ ಅಭಿಯಾನದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಪಿಡಿಒಗಳಿಗೆ ತಿಳಿಸಿದರು.  

ಈ ವೇಳೆ ತಾ.ಪಂ. ಇಒ ವೀರಣ್ಣ ವಾಲಿ ಮಾತನಾಡಿ, ಕರ ವಸೂಲಾತಿಯಲ್ಲಿ ತಾಲೂಕು ಶೇ. 80 ರಷ್ಟು ಪ್ರಗತಿ ಸಾಧಿಸಿದೆ. ನಾಳೆ ನಡೆಯುವ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲು ಸೂಚಿಸಿದರು. ತಾ.ಪಂ.ನ ಎ.ಡಿ. ಅನ್ಸಾರಿ, ಜಮಾಬಂಧಿಯ ಕುರಿತು ಮಾಹಿತಿ ನೀಡಿದರು.  

ಈ ಸಂದರ್ಭದಲ್ಲಿ ಬಿಇಒ, ಸಿಡಿಪಿಒ, ಎಡಿ ನರೇಗಾ ಶಿವಾನಂದ ಸನಾಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಪಶುಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾ.ಪಂ. ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.