ಮುಗಳಿಹಾಳ ಗ್ರಾಮದಲ್ಲಿ ಅತಿ ವಿಜೃಂಭಣೆಯಿಂದ ಕ್ರಿಸ್ ಮಸ್ ಆಚರಣೆ
Christmas celebrated with great pomp in Mugalihala village
ಯರಗಟ್ಟಿ 26: ಸಮೀಪದ ಮುಗಳಿಹಾಳ ಗ್ರಾಮದ ಚರ್ಚ್ ನಲ್ಲಿ ಗುರುವಾರ ನಡೆದ ಕ್ರಿಸ್ ಮಸ್ ಪ್ರಾರ್ಥನೆಯನ್ನು ಸ್ಥಳೀಯ ಸಭಾಪಾಲಕರಾದ ಪಾಸ್ಟರ್ ಮಾರ್ಕ್ ಖಣದಾಳ ಇವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಈ ಕ್ರಿಸ್ಮಸ್ ಹಬ್ಬಕ್ಕೆ ಮುಖ್ಯ ಅತಿಥಿಗಳಾದ ರೇವರೆಂಡ ವಿಲಸನ್ ಸೊಪ್ಪಡ್ಲ ಮಾತನಾಡಿ " ಯೇಸು ಕ್ರಿಸ್ತರು ಜಗತ್ತಿಗೆ ಶಾಂತಿ ಸಾರಲು ಬಂದರು. ಈ ಸಂದೇಶವನ್ನು ದೂತರು ಕುರುಬರಿಗೆ ತಿಳಿಸಿದರು. ಅದೇ ರೀತಿ ದೇವರು ಎಲ್ಲರಿಗೂ ಶಾಂತಿ ಸಮಾಧಾನ ನೀಡಲಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮುಗಳಿಹಾಳ ಗ್ರಾ. ಪಂ. ಸದಸ್ಯರಾದ ಪದ್ಮಾವತಿ ಗೋ. ಮುರಗಟ್ಟಿ ಯವರು ಮಾತನಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಮುರಗೋಡ ಪಿಎಸ್ಐ ಎಲ್ ಬಿ ಮಾಳಿ, ಹವಾಲ್ದಾರ್ ವಿ. ಎಸ್. ಯರಗಟ್ಟಿಮಠ, ಪಿಕೆಪಿಎಸ್ ಉಪಾಧ್ಯಕ್ಷರಾದ ಗೋವಿಂದಪ್ಪ ಮುರಗಟ್ಟಿ, ಸದಸ್ಯರಾದ ಯಲ್ಲಪ್ಪ ಪೂಜೇರಿ, ಆದಿ ಜಾಠವ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ರಾಮವ್ವಾ ಖುರೋಸಿ, ಮಾರುತಿ ಧರ್ಮಟ್ಟಿ, ಯಶವಂತ ಪೂಜೇರಿ, ವಿಠ್ಠಲ ಇಳಿಗೆರ, ಮಾರುತಿ ಕತ್ತಿ, ಯಲ್ಲವ್ವ ಅರಭಾವಿ, ಬಾಳವ್ವ ಹರಿಜನ ಹಾಗೂ ಹಿರಿಯರು, ಸ್ತ್ರೀಯರು, ಮಕ್ಕಳು ಭಾಗವಹಿಸಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ದಿಂದ ಆಚರಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 