ಮುಗಳಿಹಾಳ ಗ್ರಾಮದಲ್ಲಿ ಅತಿ ವಿಜೃಂಭಣೆಯಿಂದ ಕ್ರಿಸ್ ಮಸ್ ಆಚರಣೆ
Christmas celebrated with great pomp in Mugalihala village
ಯರಗಟ್ಟಿ 26: ಸಮೀಪದ ಮುಗಳಿಹಾಳ ಗ್ರಾಮದ ಚರ್ಚ್ ನಲ್ಲಿ ಗುರುವಾರ ನಡೆದ ಕ್ರಿಸ್ ಮಸ್ ಪ್ರಾರ್ಥನೆಯನ್ನು ಸ್ಥಳೀಯ ಸಭಾಪಾಲಕರಾದ ಪಾಸ್ಟರ್ ಮಾರ್ಕ್ ಖಣದಾಳ ಇವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಈ ಕ್ರಿಸ್ಮಸ್ ಹಬ್ಬಕ್ಕೆ ಮುಖ್ಯ ಅತಿಥಿಗಳಾದ ರೇವರೆಂಡ ವಿಲಸನ್ ಸೊಪ್ಪಡ್ಲ ಮಾತನಾಡಿ " ಯೇಸು ಕ್ರಿಸ್ತರು ಜಗತ್ತಿಗೆ ಶಾಂತಿ ಸಾರಲು ಬಂದರು. ಈ ಸಂದೇಶವನ್ನು ದೂತರು ಕುರುಬರಿಗೆ ತಿಳಿಸಿದರು. ಅದೇ ರೀತಿ ದೇವರು ಎಲ್ಲರಿಗೂ ಶಾಂತಿ ಸಮಾಧಾನ ನೀಡಲಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮುಗಳಿಹಾಳ ಗ್ರಾ. ಪಂ. ಸದಸ್ಯರಾದ ಪದ್ಮಾವತಿ ಗೋ. ಮುರಗಟ್ಟಿ ಯವರು ಮಾತನಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಮುರಗೋಡ ಪಿಎಸ್ಐ ಎಲ್ ಬಿ ಮಾಳಿ, ಹವಾಲ್ದಾರ್ ವಿ. ಎಸ್. ಯರಗಟ್ಟಿಮಠ, ಪಿಕೆಪಿಎಸ್ ಉಪಾಧ್ಯಕ್ಷರಾದ ಗೋವಿಂದಪ್ಪ ಮುರಗಟ್ಟಿ, ಸದಸ್ಯರಾದ ಯಲ್ಲಪ್ಪ ಪೂಜೇರಿ, ಆದಿ ಜಾಠವ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ರಾಮವ್ವಾ ಖುರೋಸಿ, ಮಾರುತಿ ಧರ್ಮಟ್ಟಿ, ಯಶವಂತ ಪೂಜೇರಿ, ವಿಠ್ಠಲ ಇಳಿಗೆರ, ಮಾರುತಿ ಕತ್ತಿ, ಯಲ್ಲವ್ವ ಅರಭಾವಿ, ಬಾಳವ್ವ ಹರಿಜನ ಹಾಗೂ ಹಿರಿಯರು, ಸ್ತ್ರೀಯರು, ಮಕ್ಕಳು ಭಾಗವಹಿಸಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ದಿಂದ ಆಚರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 