ಬಾಲಕಾರ್ಮಿಕ ಯೋಜನೆ: ಗಂಗಾವತಿ ತಾಲ್ಲೂಕಿನ ವಿವಿಧೆಡೆ ತಪಾಸಣೆ, ವಿಶೇಷ ಜಾಗೃತಿ
ಕೊಪ್ಪಳ 28: ಜಿಲ್ಲಾ ಬಾಲಕಾರ್ಮಿಕ ಯೋಜನೆಯಡಿ ಗಂಗಾವತಿ ತಾಲ್ಲೂಕಿನ ವಿವಿಧೆಡೆ ಬಾಲಕಾರ್ಮಿಕ ದಾಳಿ, ತಪಾಸಣೆ ನಡೆಸಲಾಯಿತು ಮತ್ತು ಸಾರ್ವಜನಿಕರಿಗೆ ವಿಶೇಷ ಜಾಗೃತಿ ಮೂಡಿಸಲಾಗಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ ಹಾಗೂ ಕಾರ್ಮಿಕ ಆಯುಕ್ತರು ಬೆಂಗಳೂರು ರವರ ನಿರ್ದೇಶನದಂತೆ ಕಂಓ-ಋಆಋ ಖಛಿಣಜ ್ಘ ಖಜಚಿಛಟಣಚಿಣಠ ಅಚಿಟಠಿಚಿರಟಿ ಠ ಅಟಜ ಚಿಟಿಜ ಂಜಠಛಿಜಟಿಣ ಐಚಿಛಠಡಿ 2.0 "ಂ ಖಣಜಠಿ ಣಠ ಇಡಿಚಿಜಛಿಚಿಣಜ ಅಟಜ ಐಚಿಛಠಡಿ" ರಕ್ಷಣಾ ಅಭಿಯಾನ ಕಾರ್ಯಾಚರಣೆ ಆಯೋಜಿಸಲು ಸೂಚಿಸಿರುತ್ತಾರೆ. ಅದರಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿವಿಧ ಹೋಟೆಲ್, ಗ್ಯಾರೇಜ್, ಕಾರ್ಖಾನೆಗಳು, ಇಟ್ಟಂಗಿ ಭಟ್ಟಿ, ಬೇಕರಿ ಅಂಗಡಿ, ಬಟ್ಟೆ ಅಂಗಡಿಗಳ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳ ಪಾಲಕರ ಮಾಲೀಕತ್ವದ ಗ್ಯಾರೇಜ್ಗಳಲ್ಲಿ ಇಬ್ಬರು ಶಾಲೆ ಬಿಟ್ಟ ಮಕ್ಕಳು ಪತ್ತೆಯಾಗಿದ್ದು, ಇಬ್ಬರೂ ಮಕ್ಕಳನ್ನು ಪುನ: ಅವರು ಈ ಮೊದಲು ಅಭ್ಯಾಸ ಮಾಡಿದ ಶಾಲೆಗಳಿಗೆ ದಾಖಲಿಸಲಾಯಿತು. ಈ ತಪಾಸಣೆ ಕಾರ್ಯದಲ್ಲಿ ಕಾರ್ಮಿಕ ನೀರೀಕ್ಷಕ ಅಶೋಕ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಜಾಗೃತಿ: ಈ ಸಮಯದಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಬಿತ್ತಿ ಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಯಿತು. ಹಾಗೂ 18 ವರ್ಷದ ಒಳಗಿನ ಯಾವುದೇ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಯಿತು.