ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಚಂದ್ರಣ್ಣ ಹೆಬ್ಬಾಳರ ಆಯ್ಕೆ

ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಚಂದ್ರಣ್ಣ ಹೆಬ್ಬಾಳರ ಆಯ್ಕೆ Chandranna Hebbal elected as SDMC President

ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಚಂದ್ರಣ್ಣ ಹೆಬ್ಬಾಳರ ಆಯ್ಕೆ

ಶಿಗ್ಗಾವಿ 02: ಸರಕಾರಿ ಶಾಲೆಗಳ ಸವಾಂರ್ಗೀಣ ಅಭಿವೃದ್ದಿಗೆ ಶ್ರಮಿಸಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.  ತಾಲೂಕಿನ ತಿಮ್ಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಎಸ್‌.ಡಿ.ಎಮ್‌.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಣ್ಣ ಹೆಬ್ಬಾಳರವರಿಗೆ ತಾಲೂಕ ಗುತ್ತಿಗೆದಾರರ ಸಂಘದವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಕಡಿಮೆ ವೆಚ್ಚದಲ್ಲಿ ಶಿಕ್ಷಣ ಒದಗಿಸುವ ಮೂಲಕ ಎಲ್ಲರಿಗೂ ವಿಶೇಷವಾಗಿ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣವನ್ನು ಸುಲಭವಾಗಿ ಲಭಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಬಾಲಕಿಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಎಸ್‌.ಡಿ.ಎಮ್‌.ಸಿ ಸಮಿತಿಯವರು ಶ್ರಮಿಸಿ ಶಾಲೆಗಳನ್ನು ಮುನ್ನಡಿಸಿ ಎಂದರು.   ಈ ಸಂದರ್ಭದಲ್ಲಿಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಅರ್ಜುನ ಹಂಚಿನಮನಿ,ವಿರೂಪಾಕ್ಷಪ್ಪ ಸಾತಣ್ಣವರ, ಎಮ್‌.ಎಸ್‌.ಪಾಟೀಲ, ಗದಿಗೆಯ್ಯ ಸದಾಶಿವಪೇಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.