ಸೇತುವೆ ಕಾಮಗಾರಿಗೆ ಚಂದ್ರಕಾಂತ ಪಾಟೀಲ ಚಾಲನೆ

ಸೇತುವೆ ಕಾಮಗಾರಿಗೆ ಚಂದ್ರಕಾಂತ ಪಾಟೀಲ ಚಾಲನೆ Chandrakant Patil launches bridge work

 ಉಳ್ಳಾಗಡ್ಡಿ-ಖಾನಾಪೂರ, 06 : ಗ್ರಾಮದ ತುದಿಮಾಳ ತೋಟದ ಸಮೀಪವಿರುವ ಮಾಳವ್ವ ದೇವರ ಬಳಿ ಹಳ್ಳಕ್ಕೆ ಘಟಗಿ ತೋಟಕ್ಕೆ ಹೊಗುವ ರಸ್ತೆಗೆ ರಾಜ್ಯ ವಿಪತ್ತ್ಯುಪಶಮನ ನಿಧಿ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷ ರೂ, ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸಿದರು. 

ಈ ಸಂದರ್ಭದಲ್ಲಿ ಪಿ,ಕೆ,ಪಿ,ಎಸ್, ಅಧ್ಯಕ್ಷ ಮಹಾರುದ್ರ ಜರಳಿ, ಮಾಜಿ ಅಧ್ಯಕ್ಷ ಸುಧೀರ ಗಿರಿಗೌಡರ, ರಾಜು ಅವಟೆ, ತಾ,ಪಂ, ಅಭಿಯಂತರ ಸಭಾ ಬಸೀರ್ ಲಾಡಖಾನ್, ಮಲ್ಲಪ್ಪಾ ನಾಯಿಕ, ಸುಭಾಷ ಹೆಬ್ಬಾಳಿ, ಮಲ್ಲಪ್ಪಾ ಮಾಳಗಿ, ಪ್ರಕಾಶ ಬಸ್ಸಾಪುರಿ, ಹಣಮಂತಗೌಡಾ ಪಾಟೀಲ, ಪರಶುರಾಮ ದಂಡಗಿದಾಸ, ಗಜಬರ, ಬಾಬು ಕಡಲಗಿ, ಮಹಾದೇವ ಗಡಕರಿ, ಬಾಳೇಶ ಜರಳಿ, ಮಲ್ಲಪ್ಪಾ ರುದ್ರಗೌಡರ, ಜಂಗುದ್ದಿನ್ ದ್ರಾಕ್ಷಿ, ಬಾಬು ಕಡಲಗಿ, ಬಸವರಾಜ ಗಿರಮಲ್ಲನವರ, ಮುಂತಾದವರು ಉಪಸ್ಥಿತರಿದ್ದರು,