ಚಡಚಣ ಸಂಗಮೇಶ್ವರ ಜಾನುವಾರ ಜಾತ್ರೆ: ಪ್ರತಿ ವಗಿವಾಟಿಗೆ 5 ರೂ. ಗೆ ಪಡೆಯಲು ರೈತರ ಆಗ್ರಹ
Chadachana Sangameshwara cattle fair: Farmers demand to get Rs. 5 per hectare
ಚಡಚಣ 18: ರಂದು ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟಗಾರಗೆ ಹಾಗೂ ಖರೀದಿಗಾರರಿಗೆ ಪ್ರತಿ ವಹಿವಾಟಿಗೆ ರೂ.5 ಘೋಷಣೆ ಮಾಡುವಂತೆ ಆಗ್ರಹಿಸಿ ರೈತರು ಎಪಿಎಂಸಿ ಅಧಿಕಾರಿಗೆ ಮನವಿ ಶುಕ್ರವಾರ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ವಸಂತ ಬೈರಾಮಡಿ, ಜ.18 ರಂದು ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆ ಪ್ರಾರಂಭವಾಗುವದರಿಂದ ಜಾತ್ರೆಗೆ ಆಗಮಿಸುವ ರೈತರಿಂದ ಜಾತ್ರಾ ಸಮೀತಿಯವರು ಖರೀದಿದಾರರಿಗೆ ರೂ 100, ಮಾರಾಟಗಾರರಿಗೆ ರೂ.100 ವಸೂಲಿ ಮಾಡುತ್ತಿದ್ದಾರೆ.
ಈ ಹಣ ರೈತರಿಗೆ ಹೊರೆಯಾಗುತ್ತದೆ. ಆದುದರಿಂದ ಎಪಿಎಂಸಿ ನಿಯಮಾನುಸಾರ ಪ್ರತಿ ವಹಿವಾಟುದಾರರಿಗೆ 5 ರೂ ಪಡೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶ್ರೀಶೈಲ ದೈಗೊಂಡಿ, ಮುರಗೇಶ ಸಿಂಪಿ, ಪ್ರಕಾಶ ಬತಗುಣಕಿ, ಭೀಮಾಶಂಕರ ಉಮರಾಣಿ ಇದ್ದರು.- ಪ್ರತಿ ಜಾನುವಾರ ಜಾತ್ರೆಯಲ್ಲಿ ಎಪಿಎಂಸಿ ನಿಯಮಾನುಸಾರ ಪ್ರತಿ ಜಾನುವಾರ ವಹಿವಾಟಿಗೆ 5 ರೂ. ತೆಗೆದುಕೊಳ್ಳುವ ನಿಯಮವಿದೆ. ಪಟ್ಟಣದಲ್ಲಿ ಎಪಿಎಂಸಿ ವತಿಯಿಂದ ಜಾತ್ರೆ ನಡೆಸಲು ಸ್ಥಳಾವಕಾಶ ಇಲ್ಲದ ಕಾರಣ ಪಟ್ಟಣದ ಶ್ರೀ ಸಂಗಮೇಶ್ವರ ಸಂಸ್ಥೆಗೆ ಜಾತ್ರೆ ನಡೆಸಲು ಅನುಮತಿಸಿದೆ. ಅವರಿಗೂ ಪ್ರತಿ ಜಾನುವಾರು ವಹಿವಾಟಿಗೆ 5 ಪಡೆಯುವಂತೆ ತಿಳಿಸಿಲಾಗಿದೆ. ಐ.ಎಸ್. ಓರಾದಕರ ಎಪಿಎಂಸಿ ಅಧಿಕಾರೀ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 