ಐಎಎಸ್ ಅಧಿಕಾರಿಗಳಿಗೆ ಕೇಂದ್ರದ ಫರ್ಮಾನು: ಆಸ್ತಿ ವಿವರ ಸಲ್ಲಿಸಿ ಇಲ್ಲ ಕ್ರಮ ಎದುರಿಸಿ

ಐಎಎಸ್ ಅಧಿಕಾರಿಗಳಿಗೆ ಕೇಂದ್ರದ ಫರ್ಮಾನು: ಆಸ್ತಿ ವಿವರ ಸಲ್ಲಿಸಿ ಇಲ್ಲ ಕ್ರಮ ಎದುರಿಸಿ Central decree to IAS officers: Submit asset details or face action


ನವದೆಹಲಿ: ಎಲ್ಲಾ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಗಳು ತಮ್ಮ ಆಸ್ತಿ ವಿವರಗಳನ್ನು ಸಕಾಲದಲ್ಲಿ ಸಲ್ಲಿಸಬೇಕು , ಇಲ್ಲವಾದಲ್ಲಿ ಶಿಸ್ತು ಕ್ರಮಗಳು ಮತ್ತು ಬಡ್ತಿ ನಿರಾಕರಣೆ ಸೇರಿದಂತೆ ಕ್ರಮವನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ಕೇಂದ್ರ ಸರಕಾರ ಅಧಿಕೃತ ಪ್ರಕಟಣೆಯಲ್ಲಿ ಖಡಕ್ ಸೂಚನೆ ನೀಡಿದೆ.

ಎಲ್ಲಾ ಐಎಎಸ್ ಅಧಿಕಾರಿಗಳು ಜನವರಿ 31 ರೊಳಗೆ ವಾರ್ಷಿಕ ಸ್ಥಿರ ಆಸ್ತಿ ವಿವರ (ಐಪಿಆರ್) ಸಲ್ಲಿಸಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

ಸಿಬಂದಿ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ"ಸೇವೆಯ ಸದಸ್ಯರು ಮೇಲೆ ತಿಳಿಸಿದ ನಿಬಂಧನೆಗಳ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಾರಣವಾಗಲಿದೆ" ಎಂದು ಸೂಚಿಸಲಾಗಿದೆ.