ಐನಾಪೂರ ಪಟ್ಟಣದ ಕೆಆರ್ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮ
Centenary celebration of KR Educational Institution of Ainapur town
ಐನಾಪೂರ ಪಟ್ಟಣದ ಕೆಆರ್ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮ
ಕಾಗವಾಡ 30 : ಪ್ರತಿಯೊಬ್ಬರು ಸ್ವಾವಲಂಬನೆಯಿಂದ ಬದುಕಬೇಕಾದರೇ ಶಿಕ್ಷಣ ಹಾಗೂ ಸಂಸ್ಕಾರ ಅತೀ ಮುಖ್ಯವಾಗಿದೆ. ಮಕ್ಕಳು ಯಶಸ್ಸಿನ ಉತ್ತುಂಗಕ್ಕೆ ಏರಬೇಕಾದರೆ ಗಡಿಯಾರದ ಮುಳ್ಳಿನ ಹಾಗೆ ಸತತ ಪ್ರಯತ್ನವಿರಬೇಕೆಂದು ಹುಬ್ಬಳ್ಳಿಯ ಖ್ಯಾತ ಚಿಕ್ಕಮಕ್ಕಳ ಹಾಗೂ ಕಿಡ್ನಿ ತಜ್ಞೆ ಡಾ. ಸೀತಾ ಮುತಾಲಿಕ ಹೇಳಿದರು. ಅವರು ಬುಧವಾರ ದಿ. 29 ರಂದು ಐನಾಪೂರ ಪಟ್ಟಣದ ಕೆಆರ್ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮದ ಅಂಗ ಸಂಸ್ಥೆಗಳ ಮಹಾಸಂಗಮದ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ, ಮಾತನಾಡುತ್ತಿದ್ದರು. ನಾನು ಇದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವದು ಹೆಮ್ಮೆ ಎನಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವ, ರಾಮಾಯಣ, ಮಹಾಭಾರತದಂತಹ ಧಾರ್ಮಿಕ ಜ್ಞಾನದ ಅವಶ್ಯಕತೆ ಇದ್ದು, ದೇಶಭಕ್ತರ ಹಾಗೂ ಉನ್ನತ ಸಾಧನೆಗೈದ ಮಹಾಪುರುಷರ ಬಗ್ಗೆ ಶಿಕ್ಷಕರು ಜ್ಞಾನಾರ್ಜನೆ ನೀಡಬೇಕೆಂದರು. ಇನ್ನೋರ್ವ ಅತಿಥಿ, ಸಂಸ್ಥೆಯ ವಿದ್ಯಾರ್ಥಿ ಕೆಎಲ್ಇ ಸಂಸ್ಥೆಯ ಖ್ಯಾತ ಎಲುಬು ಕೀಲುಗಳ ಮತ್ತು ನರರೋಗ ತಜ್ಞ ಡಾ. ಆನಂದಕುಮಾರ ಖಟಾಂವಿ ಮಾತನಾಡಿ, ಜೀವನದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸಬೇಕಾದರೆ ನಿರ್ದಿಷ್ಠವಾದ ಗುರಿ ಹೊಂದಿರಬೇಕು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮಕ್ಕಳು ಪರಿಶ್ರಮ ವಹಿಸದರೆ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ಎಂದರು. ಪ.ಪಂ. ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷ ಸಂಜಯ ಭಿರಡಿ ಮಾತನಾಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಾರ್ಚಿ, ಮೋಹನರಾ ಮುತಾಲಿಕ, ರಾಜೇಂದ್ರ ಪೋದ್ರಾರ, ಪ್ರವೀಣ ಗಾಣಿಗೇರ, ಸಂತೋಷ ಪಾಟೀಲ, ಸುರೇಶ ಗಾಣಿಗೇರ, ತಮ್ಮಣ್ಣ ಪಾರಶೆಟ್ಟಿ, ಪ್ರವೀಣ ಕುಲಕರ್ಣಿ, ಉದಯ ನಿಡಗುಂದಿ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 