ಐನಾಪೂರ ಪಟ್ಟಣದ ಕೆಆರ್ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮ
Centenary celebration of KR Educational Institution of Ainapur town
ಐನಾಪೂರ ಪಟ್ಟಣದ ಕೆಆರ್ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮ
ಕಾಗವಾಡ 30 : ಪ್ರತಿಯೊಬ್ಬರು ಸ್ವಾವಲಂಬನೆಯಿಂದ ಬದುಕಬೇಕಾದರೇ ಶಿಕ್ಷಣ ಹಾಗೂ ಸಂಸ್ಕಾರ ಅತೀ ಮುಖ್ಯವಾಗಿದೆ. ಮಕ್ಕಳು ಯಶಸ್ಸಿನ ಉತ್ತುಂಗಕ್ಕೆ ಏರಬೇಕಾದರೆ ಗಡಿಯಾರದ ಮುಳ್ಳಿನ ಹಾಗೆ ಸತತ ಪ್ರಯತ್ನವಿರಬೇಕೆಂದು ಹುಬ್ಬಳ್ಳಿಯ ಖ್ಯಾತ ಚಿಕ್ಕಮಕ್ಕಳ ಹಾಗೂ ಕಿಡ್ನಿ ತಜ್ಞೆ ಡಾ. ಸೀತಾ ಮುತಾಲಿಕ ಹೇಳಿದರು. ಅವರು ಬುಧವಾರ ದಿ. 29 ರಂದು ಐನಾಪೂರ ಪಟ್ಟಣದ ಕೆಆರ್ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮದ ಅಂಗ ಸಂಸ್ಥೆಗಳ ಮಹಾಸಂಗಮದ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ, ಮಾತನಾಡುತ್ತಿದ್ದರು. ನಾನು ಇದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವದು ಹೆಮ್ಮೆ ಎನಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವ, ರಾಮಾಯಣ, ಮಹಾಭಾರತದಂತಹ ಧಾರ್ಮಿಕ ಜ್ಞಾನದ ಅವಶ್ಯಕತೆ ಇದ್ದು, ದೇಶಭಕ್ತರ ಹಾಗೂ ಉನ್ನತ ಸಾಧನೆಗೈದ ಮಹಾಪುರುಷರ ಬಗ್ಗೆ ಶಿಕ್ಷಕರು ಜ್ಞಾನಾರ್ಜನೆ ನೀಡಬೇಕೆಂದರು. ಇನ್ನೋರ್ವ ಅತಿಥಿ, ಸಂಸ್ಥೆಯ ವಿದ್ಯಾರ್ಥಿ ಕೆಎಲ್ಇ ಸಂಸ್ಥೆಯ ಖ್ಯಾತ ಎಲುಬು ಕೀಲುಗಳ ಮತ್ತು ನರರೋಗ ತಜ್ಞ ಡಾ. ಆನಂದಕುಮಾರ ಖಟಾಂವಿ ಮಾತನಾಡಿ, ಜೀವನದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸಬೇಕಾದರೆ ನಿರ್ದಿಷ್ಠವಾದ ಗುರಿ ಹೊಂದಿರಬೇಕು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮಕ್ಕಳು ಪರಿಶ್ರಮ ವಹಿಸದರೆ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ಎಂದರು. ಪ.ಪಂ. ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷ ಸಂಜಯ ಭಿರಡಿ ಮಾತನಾಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಾರ್ಚಿ, ಮೋಹನರಾ ಮುತಾಲಿಕ, ರಾಜೇಂದ್ರ ಪೋದ್ರಾರ, ಪ್ರವೀಣ ಗಾಣಿಗೇರ, ಸಂತೋಷ ಪಾಟೀಲ, ಸುರೇಶ ಗಾಣಿಗೇರ, ತಮ್ಮಣ್ಣ ಪಾರಶೆಟ್ಟಿ, ಪ್ರವೀಣ ಕುಲಕರ್ಣಿ, ಉದಯ ನಿಡಗುಂದಿ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 