ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ : ತಹಶೀಲ್ದಾರ ಮನವಿ
Celebrate festivals with harmony: Tahsildar appeals
ಬೀಳಗಿ 28 : ಹಬ್ಬದ ಸಮಯದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಸರ್ವ ದಾರ್ಮಿಕ ಮುಖಂಡರಿಗೆ ಸಿಪಿಐ ಹಣಮಂತ ಸಣಮನಿ ಹಾಗೂ ತಹಶೀಲ್ದಾರ ವಿನೋದ ಹತ್ತಳ್ಳಿ ಜಂಟಿಯಾಗಿ ಮನವಿ ಮಾಡಿಕೊಂಡರು. ಬೀಳಗಿ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಾಗೂ ರಮಜಾನ ಪೂರ್ವಭಾವಿ ಕರೆದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಬ್ಬ ಹರಿದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಜೊತೆ ನಿಮ್ಮ ಸಹಕಾರ ಅಷ್ಟೇ ಮುಖ್ಯ.
ಬೀಳಗಿ ತಾಲೂಕು ಜಿಲ್ಲೆಯಲ್ಲೇ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವ ಪ್ರತೀತಿ ಮೊದಲಿನಿಂದಲು ಇದೆ. ಇಲ್ಲಿಯವರೆಗೆ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರುವ ಉದಾಹರಣೆಗಳೆ ಇಲ್ಲಾ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಹೋಳಿ ಹಬ್ಬ ಬಣ್ಣದ ದಿನ ಹೆಣ್ಣು ಮಕ್ಕಳಿಂದ ನಡೆಯುವ ಹಾಡು-ಕುಣಿತ ರಸಮಂಜರಿಗೆ ಅವಕಾಶ ಕಲ್ಪಿಸಿಕೊಡುವುದು-ಬಿಡುವುದು ನಾವು ನಿರ್ಣಯ ತೆಗೆದುಕೊಳ್ಳುತ್ತೇವೆ. ಕಳೆದ ಬಾರಿ ಬಸ್ ನಿಲ್ದಾಣ ಬಳಿಯಿರುವ ರಸ್ತೆಯಲ್ಲಿ ಆಯೋಜಿಸಿದ ಹಾಡು-ಕುಣಿತ ರಸಮಂಜರಿ ವೇದಿಕೆ ಕಾರ್ಯಕ್ರಮದಿಂದ ಬಣ್ಣ ಆಡದ ವೃದ್ಧರಿಗೆ, ಮಹಿಳೆಯರಿಗೆ, ಬೇರೆಡೆಗೆ ಹೋಗುವ ಪ್ರಯಾಣಿಕರಿಗೆ, ವಾಹನಗಳಲ್ಲಿ ತೆರಳುತ್ತಿರುವ ಸಾರ್ವಜನಿಕರಿಗೆ ತುಂಬಾ ತೊಂದರೆಗಳಾಗಿವೆ. ಈ ಬಾರಿ ಬೇರೆಯವರಿಗೆ ತೊಂದರೆ ಯಾಗದಂತೆ ಹೋಲಿ ಆಡಬೇಕು, ಪಿಯು ಪರೀಕ್ಷೆಗಳು ಇರುವುದರಿಂದ ಪರೀಕ್ಷೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದರು.
ರಾಜು ಬೋರ್ಜಿ ಮಾತನಾಡಿ, ಹೆಣ್ಣು ಮಕ್ಕಳನ್ನು ಕರೆಸಿ ಹಾಡು-ಕುಣಿತ ರಸಮಂಜರಿ ಬಂದ್ ಆಗಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದರು. ಮುತ್ತು ಬೋರ್ಜಿ ಮಾತನಾಡಿ, ಕಳೆದ ಬಾರೆಯಂತೆ ಹಾಡು-ಕುಣಿತದ ಜೊತೆಗೆ ಬಣ್ಣ ಆಡುವುದರಿಂದ ಹೋಳಿ ಹಬ್ಬದ ಸಂಭ್ರಮ ಹೆಚ್ಚುತ್ತದೆ. ಯುವಕರಲ್ಲಿ ಬಣ್ಣ ಆಡಿದ ಖುಷಿ ಮೂಡುತ್ತದೆ ಎಂದರು. ಸಂಗಪ್ಪ ಗಾಳಿ ಮಾತನಾಡಿ, ಬಸವ ವೃತ್ತದಲ್ಲಿ ದಿ.3ರಂದು ಸಂಜೆ ಹಲಗಿ ಮೇಳ ಇರುತ್ತದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಆಯೋಜನೆ ಮಾಡಿ ಎಂದರು. ನಿಂಗಪ್ಪ ದಂದರಗಿ, ಶಿವನಗೌಡ ಪಾಟೀಲ್, ಸಿದ್ದು ಮಾದರ, ಹಾಸಿಮಪೀರ ಮುಜಾವರ, ಮಂಜುಳಾ ಮೇರಾಕರ ಮಾತನಾಡಿದರು. ಮಹಾದೇವ ಬೋರ್ಜಿ, ಸಿದ್ದಪ್ಪ ಮೇಟಿ, ಅಜ್ಜು ಬಾಯಸರಕಾರ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 