ಹೊಸಪೇಟೆಯಲ್ಲಿ ಸಿ. ಕೃಷ್ಣಯ್ಯ ಚೆಟ್ಟಿಗ್ರೂಪ್ನ ಆಭರಣ ಪ್ರದರ್ಶನ
C. Krishnaiah Chetty Group's jewelry exhibition in Hospet
ಹೊಸಪೇಟೆ 07: 155 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತಆಭರಣ ಬ್ರ್ಯಂಡ್ ಸಿ. ಕೃಷ್ಣಯ್ಯಚೆಟ್ಟಿಗ್ರೂಪ್ಆಫ್ಜ್ಯುವೆಲ್ಲರ್ಸ್ ನವೆಂಬರ್ 7 ರಿಂದ 10, 2025ರವರೆಗೆ ಹೊಸಪೇಟೆಯ ಹೋಟೆಲ್ರಾಯಲ್ಆರ್ಕಿಡ್ ಸೆಂಟ್ರಲ್ಕೀರೀಯಲ್ಲಿರುವ ಸೀಸನ್ ಹಾಲ್ನಲ್ಲಿ ವಿಶೇಷ ಆಭರಣ ಪ್ರದರ್ಶನಕ್ಕೆ ಚಾಲನೆ ನೀಡಿದೆ. ಈ ನಾಲ್ಕು ದಿನಗಳ ವಿಶೇಷ ಪ್ರದರ್ಶನವನ್ನು ವಿಜಯನಗರಜಿಲ್ಲೆಯಜಿಲ್ಲಾಧಿಕಾರಿಕವಿತಾಎಸ್ ಮನ್ನಿಕೇರಿಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಅವರು, "ಇಂತಹ ಶ್ರೀಮಂತ ಇತಿಹಾಸ ಹೊಂದಿರುವ ಬ್ರ್ಯಂಡ್ ಹೊಸಪೇಟೆಗೆತನ್ನಕಲಾತ್ಮಕತೆಯನ್ನು ಹೊತ್ತುತಂದಿರುವುದು ಸಂತೋಷಕರ. ಈ ವಿನ್ಯಾಸಗಳು ಕಥೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವತುಂಬಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿ. ಕೃಷ್ಣಯ್ಯಚೆಟ್ಟಿಗ್ರೂಪ್ನ ಮಳಿಗೆಯ ಮುಖ್ಯಸ್ಥರಾದ ಶ್ರೀಹರಿ ಅವರು ಮಾತನಾಡಿ, "ನಮ್ಮ ಪರಂಪರೆಯನ್ನು ಹೊಸಪೇಟೆಜನರೊಂದಿಗೆ ಹಂಚಿಕೊಳ್ಳಲು ಮತ್ತು ನಮ್ಮ ಹೊಸ ಆಲೋಚನೆಗಳಾದ ’ಛಿಡಿಛಿ.ಛಿಟಣಛ’ ನಂತಹ ಸಂಗ್ರಹಗಳನ್ನು ಪರಿಚಯಿಸಲು ಈ ಪ್ರದರ್ಶನವುಉತ್ತಮ ವೇದಿಕೆಯಾಗಿದೆ" ಎಂದರು. ‘ಹೊಸಪೇಟೆಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ - ಕಲಾತ್ಮಕತೆ, ಪರಂಪರೆಯ ಪ್ರದರ್ಶನ. ಇಲ್ಲಿ ಸಂದರ್ಶಕರು 155 ವರ್ಷಗಳಷ್ಟು ಹಳೆಯ ಸಿ.ಕೃಷ್ಣಯ್ಯಚೆಟ್ಟಿಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆಎಂಬುದನ್ನು ವೀಕ್ಷಿಸುತ್ತಾರೆ’ ಎಂದು ಸಿ.ಕೃಷ್ಣಯ್ಯಚೆಟ್ಟಿಗ್ರೂಪ್ನ ಪಿಆರ್ ಮುಖ್ಯಸ್ಥ ಶ್ರೀ ತೇಜಸ್ಕಲ್ರಾ ಹೇಳಿದರು. ವಿಶೇಷ ರಿಯಾಯಿತಿಗಳು: ಹೊಸಪೇಟೆಗ್ರಾಹಕರಿಗೆ ವಿಶೇಷ ಕೊಡುಗೆಗಳಿದ್ದು, ಚಿನ್ನದ ಆಭರಣಗಳ ಮೇಲೆ 4ಅ ಮತ್ತು ?18.69 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಮೇಲೆ 9ಅ ವರೆಗೆರಿಯಾಯಿತಿ ಘೋಷಿಸಲಾಗಿದೆ. ಈ ಪ್ರದರ್ಶನವು ನವೆಂಬರ್ 10, 2025ರವರೆಗೆ ತೆರೆದಿರುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 