ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು- ಜನಾಕ್ರೋಶ

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು- ಜನಾಕ್ರೋಶ Broken clean drinking water units - public outrage

             ಕೊಲ್ಹಾರ 11: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದ್ದು ಅವು ಕೆಟ್ಟು ನಿಂತು ಸುಮಾರು ವರ್ಷಗಳೆ ಗತಿಸಿವೆ ಸಂಬಂಧಿಸಿದ  ತಾಲೂಕಿನ ಯಾವ ಒಬ್ಬ ಅಧಿಕಾರಿಯು ದುರಸ್ತಿ ಮಾಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ತಾಲ್ಲೂಕಿನಲ್ಲಿ ಬರುವ ಬಳೂತಿ,ಮಟ್ಯಾಳ , ತಳೇವಾಡ, ರೋಣಿಹಾಳ ಗ್ರಾಂ ಪಂ ವ್ಯಾಪ್ತಿಯಲ್ಲಿ ಬರುವ ಹಿರೇ ಗರಸಂಗಿ, ಚಿಕ್ಕ ಗರಸಂಗಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ಅವ್ಯವಸ್ಥೆಯ ಆಗರವಾಗಿದೆ ಅವುಗಳ ದುರಸ್ತಿ ಮಾಡುತ್ತಿಲ್ಲ ಕುಡಿಯುವ ನೀರಿನ ಘಟಕದ ಮೇಲೆ ಯೋಜನೆ ನಾಮಫಲಕ ಅಳವಡಿಸಿಲ್ಲ , ಕಿತ್ತು ಹೋಗಿರುವ ಕಿಡಕಿ ಬಾಗಿಲುಗಳು, ಅನೈತಿಕ ಚಟುವಟಿಕೆಗಳಿಗೆ ಎಡೆ ಮಾಡಿಕೊಟ್ಟಂತಾಗಿದೆಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿಗಳ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೆ ಹಾಗೂ ಜನಪ್ರತಿನಿಧಿಗಳೆ ಜನರ  ಸಂಕಷ್ಟ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಕೂಡಲೇ ತಾಲೂಕಿನಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಬಾಲಗೊಂಡ,ರವಿ ಚಲವಾದಿ, ಸದಾಶಿವ ಮೇಲಿನಮನಿ, ಶ್ರೀಮಂತ ಹಂಗರಗಿ, ಇತರರು ಇದ್ದರು.