ಕಣವಿ ಅವರಿಂದ ಪಾದಯಾತ್ರಿಗಳಿಗೆ ಉಪಹಾರ ಸೇವೆ

ಕಣವಿ ಅವರಿಂದ ಪಾದಯಾತ್ರಿಗಳಿಗೆ ಉಪಹಾರ ಸೇವೆ Breakfast service for hikers by Kanavi

ಕಣವಿ ಅವರಿಂದ ಪಾದಯಾತ್ರಿಗಳಿಗೆ ಉಪಹಾರ ಸೇವೆ 

  ಕೊಪ್ಪಳ 15 ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕುಕನೂರು, ತಳಕಲ್ಲು ಬಾನಾಪೂರ ಸೇರಿದಂತೆ ವಿವಿಧ ಸ್ಥಳಗಳಿಂದ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ಉಪಹಾರದ ಸೇವೆಯನ್ನು ಗದಗ- ಕೊಪ್ಪಳ ರಸ್ತೆಯ ಮಿಲೇನಿಯಂ ಪಬ್ಲಿಕ್ ಸ್ಕೂಲ್ ಆವರಣದಲ್ಲಿ  ಸಲ್ಲಿಸಲಾಯಿತು. 

ಸಂಸ್ಥೆಯ ಅಧ್ಯಕ್ಷರಾದ ಗೀರೀಶ್ ಕಣವಿ ಅವರು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆ ಮಾಡುವ ಭಕ್ತಾದಿಗಳಿಗೆ ಪ್ರತಿ ವರ್ಷ ಉಪಹಾರ ಸೇವೆ ಮಾಡಿ ಗವಿಸಿದ್ದೇಶನ ಕೃಪೆಗೆ ಪಾತ್ರರಾಗುವರು.ಪಾದಯಾತ್ರಿಗಳಿಗೆ ಪೂರಿ ಚಟ್ನಿ, ಮಂಡಾಳ ಒಗ್ಗರಣೆ, ಚಹಾದ ವ್ಯವಸ್ಥೆಯನ್ನು ಮಾಡಿ ಭಕ್ತರ ಮನವನ್ನು ತಣಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸ್ವಪ್ನಾ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.