ಬ್ಲಾಕ್ ಯುತ ಕಾಂಗ್ರೆಸ್ ನಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಬ್ಲಾಕ್ ಯುತ ಕಾಂಗ್ರೆಸ್ ನಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ Black Yuta Congress forms human chain to protest

ಬ್ಲಾಕ್ ಯುತ ಕಾಂಗ್ರೆಸ್ ನಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಮಹಾಲಿಂಗಪುರ 15: ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ವಕೀಲನೋರ್ವ ನ್ಯಾಯಾಲಯದಲ್ಲಿಯೇ ಶ್ಯೂ ಎಸೆದಿರುವುದನ್ನು ಖಂಡಿಸಿ ತೇರದಾಳ, ರಬಕವಿ-ಬನಹಟ್ಟಿ,ಮಹಾಲಿಂಗಪುರ ಬ್ಲಾಕ್ ಯುತ ಕಾಂಗ್ರೆಸ್ ವತಿಯಿಂದ ಬುಧವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎನ್ ಎ ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು. 

ತೇರದಾಳ ಬ್ಲಾಕ್ ಯುತ ಕಾಂಗ್ರೆಸ್ ಅಧ್ಯಕ್ಷ ಲಿಯಾಸ ಯಾದವಾಡ ಮತ್ತು ರಬಕವಿ-ಬನಹಟ್ಟಿ,ಮಹಾಲಿಂಗಪುರ ಬ್ಲಾಕ್ ಯುತ ಕಾಂಗ್ರೆಸ್ ಅಧ್ಯಕ್ಷ ಸೈಯದ ಶೇಖ ಮಾತನಾಡಿ, ಅಕ್ಟೋಬರ್ 6 ರಂದು ನ್ಯಾಯಾಲಯ ಕಲಾಪ ನಡೆದಾಗ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್‌.ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ, ನ್ಯಾಯಾಧೀಶರು ಖಜೂರಾಹೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪರ ನಿಲುವು ಪ್ರಕಟಿಸಿಲ್ಲ ಎಂಬ ಅಸಮಾಧಾನ ಹೊರಹಾಕಿ ನ್ಯಾಯಾಲಯದಲ್ಲಿಯೇ 'ಶ್ಯೂ' ಎಸೆದದ್ದು ಭಾರತ ದೇಶದ ಇತಿಹಾಸದಲ್ಲಿಯೇ ಘೋರ ಘಟನೆಯಾಗಿದ್ದು, ಭಾರತೀಯ ಸಂವಿಧಾನಕ್ಕೆ ಅವಮಾನಗೊಳಿಸಿದಂತಾಗಿದೆ. ಹೀಗಾಗಿ ತಕ್ಷಣ ಬಂಧಿಸಿ ವಕೀಲನಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. 

ನಂತರ ಜೀತು ಕೆಸರಗೊಪ್ಪ,ಪರಶುರಾಮ ಮೇತ್ರಿ,ಶಪೀಕ್ ಬೆಪಾರಿ ಮಾತನಾಡಿದರು.ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಐ ಲವ್ ಅಂಬೇಡ್ಕರ್ ಎಂಬ ಫ್ಲೆಕ್ಸ್‌ ಗಳನ್ನು ಹಿಡಿದು ಘೋಷಣೆ ಹಾಕುತ್ತಾ, ಪುರಸಭೆವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. 

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ,ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಹಾಲಿಂಗ ಮಾಳಿ, ಪುರಸಭೆ ನಾಮನಿರ್ದೇಶಕ ಸದಸ್ಯರಾದ ವಿನೋದ ಸಿಂಪಿ, ಆನಂದ ಬಂಡಿ,ಕಾಂಗ್ರೆಸ್ ಮುಖಂಡರಾದ ಅಶೋಕ ಬಿ.ಅಂಗಡಿ, ಲಕ್ಷ್ಮಣ ಮಾಂಗ, ರಾಜು ಭಾವಿಕಟ್ಟಿ, ಅಶೋಕ ಅಂಗಡಿ, ಮಹಾದೇವ ಕಡಬಲ್ಲನವರ, ಸಿಂಧೂರ ಹಲಸಪ್ಪಗೊಳ, ಸೈಪ ಬಾಗವಾನ,ದಾದಾ ಸನದಿ, ಮಹಾಲಿಂಗ ಪಾಟೀಲ,ವಿನೋದ ಉತ್ತೂರ, ಸೋಹೆಲ್ ಮುಲ್ಲಾ, ಪ್ರತಾಪ ಗೌಡಪ್ಪಗೋಳ, ಜಾವೀದ ಜಮಾದಾರ, ದಾನೇಶ ಮೇತ್ರಿ, ಆಫ್ರಿದ ಪಕಾಲಿ, ಸಲ್ಮಾನ್ ಪಠಾಣ, ಕಾರ್ತಿಕ ಉತ್ತೂರ, ಅಬ್ದುಲ್ ರೋಣ, ಸಲೀಂ ಸರಕಾವಸ ಸೇರಿದಂತೆ ಮಹಿಳೆಯರು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.