ಭಾರತಿ ಪಾಟೀಲರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ಪ್ರಧಾನ

ಭಾರತಿ ಪಾಟೀಲರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ಪ್ರಧಾನ  Bharathi Patil conferred with Karnataka Manikya Award

ಭಾರತಿ ಪಾಟೀಲರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ಪ್ರಧಾನ  

ಬೆಳಗಾವಿ 16: ಬೆಳಗಾವಿ ಆಜಾದ ನಗರದಲ್ಲಿರುವ ರಾಯಲ್ ರಿಟಿಸ್ ಹೋಟೆಲ್ನಲ್ಲಿ ನಗರದ ಸಮಾಜ ಸೇವಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಭಾರತಿ ಪಾಟೀಲ ಅವರಿಗೆ ಅನ್ನಪೂರ್ಣೇಶ್ವರಿ ಹ್ಯೂಮ್ಯಾನಿಟಿ ಫೌಂಡೇಶನ ಹಾಗೂ ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸುವರ್ಣ ಕರ್ನಾಟಕ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಕಾರ್ಯಕ್ರಮದಲ್ಲಿ ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು ಹಾಗೂ ಯಮನಕನಮರಡಿ ಶೂನ್ಯ ಸಂಪಾದನಾ ಹುಣಸಿಕೊಳ್ಳ ಮಠದ ಜಗದ್ಗುರು ಸಿದ್ಧ ಬಸವೇಶ್ವರ ಸ್ವಾಮೀಜಿಗಳು ಸೇರಿದಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.