ಭಾರತ ಕಲಾಭೂಷಣ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಭಾರತ ಕಲಾಭೂಷಣ ಪ್ರಶಸ್ತಿ ವಿಜೇತರಿಗೆ ಸನ್ಮಾನ   Bharat Kal Bhushan Award Winners Congratulated

ಯಮಕನಮರಡಿ 02 : ಸ್ಥಳೀಯ ಜಾನಪದ ಬಯಲಾಟ ಕಲಾವಿದರಾದ ಗೋಪಾಲ್ ಚಪನೆ ಇವರಿಗೆ ಇತ್ತೀಚೆಗೆ ವಿಶ್ವದರ್ಶನ ಪತ್ರಿಕೆ ಹುಬ್ಬಳ್ಳಿ ಇವರು ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಿ ಗ್ರಾಮದ ಬಯಲಾಟ ಕಲಾವಿದ ಗೋಪಾಲ್ ಇವರಿಗೆ ಭಾರತ ಕಲಾಭೂಷಣ ಪ್ರಶಸ್ತಿ ಲಭಿಸಿದ್ದು ಸದರಿಯವರನ್ನು ಸ್ಥಳೀಯಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದಿನಾಂಕ ಒಂದರಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ  ಎಸ ಎ ರಾಮನ ಕಟ್ಟಿ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮದ  ಅಧಿಕಾರಿ ಬಿಬಿ ಕೊಡ್ಲಿ ಸಹ ಕಾರ್ಯಕ್ರಮ ಅಧಿಕಾರಿಗಳಾದ   ಎಸ್ ಆರ್ ತಬರಿ.ಉಪನ್ಯಾಸಕರ ಬಳಗ ಉಪಸ್ಥಿತರಿದ್ದು ಚಪನೆ ಅವರನ್ನು ಸನ್ಮಾನಿಸಲಾಯಿತು.