ಭೈರ​‍್ಪನವರದ್ದು ಸ್ವಯಂಭು ವ್ಯಕ್ತಿತ್ವ : ಶಾಸ್ತ್ರಿ

ಭೈರ​‍್ಪನವರದ್ದು ಸ್ವಯಂಭು ವ್ಯಕ್ತಿತ್ವ : ಶಾಸ್ತ್ರಿ  Bhairava has a spontaneous personality: Shastri

ಭೈರ​‍್ಪನವರದ್ದು ಸ್ವಯಂಭು ವ್ಯಕ್ತಿತ್ವ : ಶಾಸ್ತ್ರಿ  

ಬೆಳಗಾವಿ 29- ರಂಗಸಂಪದ ಬೆಳಗಾವಿಯ ತಂಡದ ಹೊಸ ಆವಿಷ್ಕಾರ ಸಮಾಸದ ಎರಡನೆಯ ಕಂತು ಖ್ಯಾತ ಕಾದಂಬರಿಕಾರ ಡಾ. ಎಸ್ ಎಲ್‌. ಭೈರ​‍್ಪ ಅವರ ಭಿತ್ತಿ ಕುರಿತು ಚರ್ಚೆಯು ಲೇಖಕಿ ಶ್ರೀಮತಿ ದೀಪಿಕಾ ಚಾಟೆ ವಡಗಾವಿಯಲ್ಲಿರುವ ಅವರ ಮನೆಯಲ್ಲಿ ಜರುಗಿತು.   

ಹಿರಿಯ ಪತ್ರಕರ್ತ ಲೇಖಕ ಎಲ.ಎಸ.ಶಾಸ್ತ್ರೀ ಅವರು ಸುಮಾರು ಭಿತ್ತಿ ಪುಸ್ತಕದ ಬಗ್ಗೆ ಮಾತನಾಡುತ್ತ ಭೈರ​‍್ಪನವರದ್ದು ಸ್ವಯಂಭು ವ್ಯಕ್ತಿತ್ವ ಅಂದರೆ ತಮ್ಮನ್ನು ತಾವೇ ಕಟೆದುಕೊಂಡ ಶಿಲ್ಪಿ ಅವರು. ತಮ್ಮ ಬದುಕನ್ನು ತಾವೆ ಗುರುತಿಸಿಕೊಂಡವರು. ಭಿತ್ತಿಯಲ್ಲಿ ಯಾವುದೇ ವೈಭವಿಕರಣವಿಲ್ಲ. ಸತ್ಯವನ್ನು ಬಿಚ್ಚಿಡುತ್ತ ಹೋಗಿದ್ದಾರೆ ಎಂದು ಹೇಳಿದರು.   

ಮುಂದೆ ಮಾತನಾಡುತ್ತ ಶಾಸ್ತ್ರಿಯವರು ಭೈರ​‍್ಪನವರ ಬರವಣೆಗೆ ಹಿಂದೆ ಪೂರ್ವ ತಯಾರಿ ಬಹಳವಿರುತ್ತಿತ್ತು. ಯಾರೂ ಪ್ರಶ್ನಿಸದಂತೆ ಆಧಾರವನ್ನಿಟ್ಟುಕೊಂಡು ಅವರು ಬರೆಯುತ್ತ ಹೋಗುತ್ತಾರೆ. ಜನಪ್ರಿಯತೆಯ ತುತ್ತತುದಿಯನ್ನೇರಿದ ಸಾಹಿತಿಯೆಂದರೆ ಭೈರ​‍್ಪನವರು ಎಂದು ಹೇಳಿದರು.   

ಇದೇ ಸಂದರ್ಭದಲ್ಲಿ ಲೇಖಕಿ ಚಾಟೆಯವರ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಯೋಗದಾನ ಕೃತಿಯನ್ನು ಎಲ್‌. ಎಸ್‌. ಶಾಸ್ತ್ರೀಯವರು ಬಿಡುಗಡೆಗೊಳಿಸಿದರು.   

ಡಾ. ಅರವಿಂದ ಕುಲಕರ್ಣಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇದು ಸಮಾಸ ದ ಎರಡನೇ ತಿಂಗಳ ಕಾರ್ಯಕ್ರಮ. ಈ ತಿಂಗಳು ಡಾ. ಭೈರ​‍್ಪನವರ ಆತ್ಮ ಚರಿತ್ರೆ ಭಿತ್ತಿ ಕುರಿತು ಚರ್ಚೆಯನ್ನು ಇಟ್ಟುಕೊಂಡಿದ್ದೇವೆ. ಸಾಹಿತಿಗಳನ್ನು ಸಾಹಿತ್ಯಾಸಕ್ತರನ್ನ ಒಂದೆಡೆ ಸೇರಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಈ ಕುರಿತಂತೆ ಪ್ರತಿಕ್ರಿಯೆ ಚೆನ್ನಾಗಿದೆ ಎಂದು ಹೇಳಿದರು.  

ಡಾ. ಭೈರ​‍್ಪನವರ ಭಿತ್ತಿ ಕುರಿತಂತೆ ಜ್ಯೋತಿ ಬದಾಮಿ, ವಂದನಾ ಮಳಗಿ, ದೀಪಿಕಾ ಚಾಟೆ, ಶರಣಯ್ಯ ಮಠಪತಿ, ಮಂಜುನಾಥ ಕಲಾಲ, ಸತೀಶ ಕುಲಕರ್ಣಿಯವರು ತಮ್ಮ ಅನಿಸಿಕೆಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು. ಚಂದ್ರಶೇಖರ ನವಲಗುಂದ ಅವರು ಬರೆದ ಡಾ. ಭೈರ​‍್ಪನವರ ಕುರಿತಾದ ಬರೆಹವನ್ನು ಪದ್ಮಾ ಕುಲಕರ್ಣಿಯವರು ವಾಚಿಸಿದರು.   

ದೀಪಿಕಾ ಚಾಟೆ ಸ್ವಾಗತಿಸಿದರು ಗುರುನಾಥ ಕುಲಕರ್ಣಿ ವಂದಿಸಿದರು.