2028ಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯ ಮಂತ್ರಿಯಾಗಲಿ
Basanagouda Patil Yatnal should become the Chief Minister in 2028
ಲೋಕದರ್ಶನ ವರದಿ
ಇಂಡಿ 04 : ತಾಲ್ಲೂಕಿನ ಸಾತಲಗಾಂವ ಪಿ.ಆಯ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮೀತಿ ವತಿಯಿಂದ ಗ್ರಾಮದ ಹಾಲುಮತ ಸಮಾಜದ ಯುವಕ ನಾಗಪ್ಪ ಬಮಗೊಂಡ ಎಂಬಾತನು ವಿಜಯಪುರದ ನಗರ ಶಾಸಕ ಬಸನಗೌಡ ಆರ್ . ಪಾಟೀಲ(ಯತ್ನಾಳ) ಅವರು 2028 ಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಸಾತಲಗಾಂವ ಪಿ.ಆಯ್ ಗ್ರಾಮದಿಂದ ಸುಮಾರು 500 ಕಿಮೀ ದೂರದ ಆಂದ್ರ್ರದೇಶದ ಶ್ರೀಶೈಲಂದ ವಾರೆಗೆ ತನ್ನ ಎರಡೂ ಕಾಲಿಗೆ (ಮರಗಾಲು) ಕಟ್ಟಿಕೊಂಡು ಪಾದಯಾತ್ರೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ದಾನಯ್ಯ ಮಠಪತಿ, ಗುಂಡುರಾವ ಮಡಗೊಂಡ, ಬಸವರಾಜ ಮಡಗೊಂಡ, ಸಂಗಣ್ಣ ಹೊಸುರ, ರಮೇಶ ಮಸಳಿ ಹಾಗೂ ಸಾತಲಗಾಂವ ಪಿ.ಆಯ್ ಗ್ರಾಮಸ್ಥರು ಪಾದಯಾತ್ರೆ ತೆರಳುವ ಯುವಕನಿಗೆ ಶುಭ ಹಾರೈಸಿ ಬಿಳ್ಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 