2028ಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯ ಮಂತ್ರಿಯಾಗಲಿ

2028ಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯ ಮಂತ್ರಿಯಾಗಲಿ Basanagouda Patil Yatnal should become the Chief Minister in 2028

ಲೋಕದರ್ಶನ ವರದಿ  

ಇಂಡಿ 04 :   ತಾಲ್ಲೂಕಿನ ಸಾತಲಗಾಂವ ಪಿ.ಆಯ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮೀತಿ  ವತಿಯಿಂದ ಗ್ರಾಮದ ಹಾಲುಮತ ಸಮಾಜದ ಯುವಕ ನಾಗಪ್ಪ ಬಮಗೊಂಡ   ಎಂಬಾತನು ವಿಜಯಪುರದ ನಗರ ಶಾಸಕ ಬಸನಗೌಡ ಆರ್ . ಪಾಟೀಲ(ಯತ್ನಾಳ) ಅವರು 2028 ಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಸಾತಲಗಾಂವ ಪಿ.ಆಯ್ ಗ್ರಾಮದಿಂದ ಸುಮಾರು 500 ಕಿಮೀ ದೂರದ ಆಂದ್ರ​‍್ರದೇಶದ ಶ್ರೀಶೈಲಂದ ವಾರೆಗೆ ತನ್ನ ಎರಡೂ ಕಾಲಿಗೆ (ಮರಗಾಲು) ಕಟ್ಟಿಕೊಂಡು ಪಾದಯಾತ್ರೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ದಾನಯ್ಯ ಮಠಪತಿ, ಗುಂಡುರಾವ ಮಡಗೊಂಡ, ಬಸವರಾಜ ಮಡಗೊಂಡ, ಸಂಗಣ್ಣ ಹೊಸುರ, ರಮೇಶ ಮಸಳಿ ಹಾಗೂ ಸಾತಲಗಾಂವ ಪಿ.ಆಯ್ ಗ್ರಾಮಸ್ಥರು ಪಾದಯಾತ್ರೆ ತೆರಳುವ ಯುವಕನಿಗೆ ಶುಭ ಹಾರೈಸಿ ಬಿಳ್ಕೊಟ್ಟರು.