ಮುಗಳಿಹಾಳದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಗೋಜಿ ಕೊಪ್ಪದ ಶ್ರೀಗಳು
Bagoji Koppada Sri inaugurated the Laksha Deepotsava program in Mugalihala
ಯರಗಟ್ಟಿ 06 : ಸಮೀಪದ ಮುಗಳಿಹಾಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಐದನೇ ದಿನಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಬಾಗೋಜಿಕೊಪ್ಪದ ಡಾ: ಮ.ಘ.ಚ. ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿದರು.ಬೆಳಕಿನ ಸಂಭ್ರಮ, ಏಕತೆಯ ಪ್ರತೀಕವಾಗಿದೆ.ದೇಶಕ್ಕೆ ಬೆಳಕಿನ ಹಬ್ಬವಾಗಿ ಪರಿಣಮಿಸಿರುವ ಲಕ್ಷ ದೀಪೋತ್ಸವ ಪ್ರತಿವರ್ಷ ಬಹಳ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಉತ್ಸವವು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ವಿಶೇಷ ಸ್ಥಾನ ಹೊಂದಿದೆ.ಲಕ್ಷ ದೀಪೋತ್ಸವದ ಮುಖ್ಯ ಉದ್ದೇಶ ಅಂತರಂಗದ ಕತ್ತಲೆಯನ್ನು ತೆರವುಗೊಳಿಸುವುದು ಮತ್ತು ಸಕಾರಾತ್ಮಕ ಬದಲಾವಣೆಗೆ ಪ್ರೇರೇಪಿಸುವುದು.
ಭಕ್ತರು ಬಸವೇಶ್ವರ ದೇವಸ್ಥಾನದಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ಪ್ರತಿ ದೀಪವು ಆಶೆ, ಶಕ್ತಿ, ಜ್ಞಾನ ಮತ್ತು ಶಾಂತಿಯ ಸಂಕೇತವಾಗಿದೆ ಎಂದರು.ಈ ಸಂದರ್ಭದಲ್ಲಿ ಅಕ್ಷಯ ಮಠಪತಿ, ಗ್ರಾಮ ಪಂಚಾಯತ ಸದಸ್ಯರಾದ ರಾಮನಗೌಡ ಗಂಗರಡ್ಡಿ, ಮಾಜಿ ಗ್ರಾ ಪ ಅಧ್ಯಕ್ಷ ಶಿವಲಿಂಗಪ್ಪ ಅಕ್ಕಿಸಾಗರ, ರಾಮಯ್ಯ ಹಿರೇಮಠ, ಮಹಾದೇವ ಗಾಣಿಗೇರ, ಬಸವರಾಜ ಹಸಬಿ ಹಾಗೂ ಇನ್ನಿತರರು ಇದ್ದರುಪೋಟೋ ಶೀರ್ಷಿಕೆ: ಯರಗಟ್ಟಿ ಸಮೀಪದ ಮುಗಳಿಹಾಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವಕ್ಕೆ ಬಾಗೋಜಿ ಕೊಪ್ಪದ ಡಾ: ಮ.ಘ. ಚ. ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ರಾಮನಗೌಡ ಗಂಗರಡ್ಡಿ, ಶಿವಲಿಂಗಪ್ಪ ಅಕ್ಕಿಸಾಗರ, ಬಸವರಾಜ ದಳವಾಯಿ, ಮಹಾದೇವ ಗಾಣಿಗೇರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 