ಜಗದಾಳ ಗ್ರಾಮದ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಸೇರೆ​‍್ಡ

ಜಗದಾಳ ಗ್ರಾಮದ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಸೇರೆ​‍್ಡ BJP members from Jagdal village join Congress

ರಬಕವಿ-ಬನಹಟ್ಟಿ  16: ಜಗದಾಳ ಗ್ರಾಮದ ಬಿಜೆಪಿ ಧುರೀಣರಾದ ಡಾ.ಶಂಕ್ರಯ್ಯ ಮಠಪತಿ, ಕಾಡಪ್ಪ ಉಪ್ಪಾರ, ಸದಪ್ಪ ಉಪ್ಪಾರ, ಗಂಗಪ್ಪ ಉಪ್ಪಾರ, ಯಲ್ಲಪ್ಪ ಉಪ್ಪಾರ ಸೇರಿದಂತೆ ಅವರ ಬೆಂಬಲಿಗರು ಶುಕ್ರವಾರದಂದು ಬಿಜೆಪಿ ತೊರೆದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಗೊಂಡರು. 

ಸಿದ್ದು ಕೊಣ್ಣೂರ ಓರ್ವ ಸಹೃದಯಿಯಾಗಿದ್ದು, ಯಾವುದೇ ಅಧಿಕಾರವಿರದಿದ್ದರೂ ಕ್ಷೇತ್ರದ ಕೆಲಸಗಳಿಗೆ ಮತ್ತು ಜನತೆಯ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಬಿಜೆಪಿಯಲ್ಲಿ ದುರಹಂಕಾರ ಪ್ರವೃತ್ತಿ ಹೆಚ್ಚುತ್ತಿದ್ದು, ಸಮುದಾಯ ಪ್ರೇಮ ಮತ್ತು ಕಾರ್ಯಕರ್ತರ ಉದಾಸೀನ ಹೆಚ್ಚುತ್ತಿರುವ ಕಾರಣ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರೆ​‍್ಡಯಾಗುತ್ತಿದ್ದೇವೆಂದರು ಎಲ್ಲ ಕಾರ್ಯಕರ್ತರು ಹೇಳಿದರು. ಸಿದ್ದು ಕೊಣ್ಣೂರ ಎಲ್ಲ ಕಾರ್ಯಕರ್ತರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿಕೊಂಡರು.