ನಿಸ್ವಾರ್ಥ ಸೇವೆ ಮಾಡಿದ ಸಂದರ್ಭಗಳಲ್ಲಿ ಪ್ರಶಸ್ತಿ ಸನ್ಮಾನ
ಕೊಪ್ಪಳ 03 : ಯಾವುದೇ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡಿದ ಸಂದರ್ಭಗಳಲ್ಲಿ ಪ್ರಶಸ್ತಿ ಸನ್ಮಾನ ಲಭಿಸಿದರೆ ಅದರಿಂದ ನಾವು ಸೇವೆ ಮಾಡುವ ಕ್ಷೇತ್ರದಲ್ಲಿ ಇನ್ನಷ್ಟು ಪ್ರೋತ್ಸಾಹ ದೊರೆಯುತ್ತದೆ ಸನ್ಮಾನಗಳು ಪ್ರಶಸ್ತಿಗಳಿಂದ ನಮ್ಮ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಪ್ರಶಸ್ತಿ ಪುರಸ್ಕೃತ ಸಹ ಶಿಕ್ಷಕಿ ಸುಜಾತಾ ಮುದಗಲ್ ಹೇಳಿದರು , ಕೊಪ್ಪಳ ತಾಲೂಕ ಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ ಪತ್ರಿಕೆಯೊಂದಿಗೆ ಹೇಳಿಕೆ ನೀಡಿದ ಆ ವರು ಸದರಿ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚು ಗೊಂಡಿದೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಇದು ಪ್ರೋತ್ಸಾಹ ಸಿಕ್ಕಿದೆ ,ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಆವರು ನನಗೆ ಪ್ರಶಸ್ತಿ ನೀಡಿದ ಸಂಘಟನೆ ಗಳಿಗೆ ಅಭಿನಂದಿಸುವೇ ಎಂದು ಸುಜಾತಾ ಮುದಗಲ್ ಹೇಳಿದರು.