ಡಿ.29 ರಂದು ಸಂಗೀತ ಶಿಕ್ಷಕ ಮಹಾಂತಯ್ಯ ಶಾಸ್ತ್ರಿಗೆ ಪ್ರಶಸ್ತಿ ಪ್ರಧಾನ

Award distribution to Music teacher Mahantaiah Shastri

ಕೊಪ್ಪಳ 28: ನಿತೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು ಇವರ ವತಿಯಿಂದ ಕನ್ನಡ ರಾಜ್ಯೋತ್ಸವ 2024 ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ಹಲವು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜು ಹತ್ತಿರದ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ಡಿ.29 ರ ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳ ಜಿಲ್ಲೆಯ ಸಂಗೀತ ಶಿಕ್ಷಕ ಮಹಾಂತಯ್ಯ ಶಾಸ್ತ್ರಿಗಳು ಹಿರೇಮಠ ಹಿರೇಬಗನಾಳ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಇವರು ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದು, ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ  ಸಂಗೀತ ಪುರಾಣ ಪ್ರವಚನ  ಕಲಿತು ಮೈಸೂರು ಪ್ರಾಂತ್ಯದಲ್ಲಿ  ಅಂದರೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ  ಸುಮಾರು ಹದಿಮೂರು ಹದಿನಾಲ್ಕು ವರ್ಷ ಸಂಗೀತ ಶಿಕ್ಷಕನಾಗಿ ಕರ್ತವ್ಯವನ್ನು ನಿರ್ವಹಿಸಿ ಆ ಕ್ಷೇತ್ರದಲ್ಲಿ ಗಣನೀಯವಾಗಿ  ಅನೇಕ ಕಾರ್ಯಕ್ರಮಗಳು ನೀಡುತ್ತಾ  ಮಠಮಾನ್ಯಗಳಲ್ಲಿ  ಪುರಾಣ ಪ್ರವಚನ ಹಾಗೂ ಸಂಗೀತ ಸೇವೆಯಿಂದ ಅನೇಕ ಪ್ರಶಸ್ತಿಗಳು ಲಭಿಸಿದವು.  

ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ದಸರಾ ಉತ್ಸವ  ಚಾಮರಾಜನಗರ  ವಚನ ಸಂಗೀತ  ಆನೆಗುಂದಿ ಉತ್ಸವದಲ್ಲಿ ದಾಸವಾಣಿ  25ನೇ ವರ್ಷದ ಕೊಪ್ಪಳ  ವಚನ ಸಂಗೀತ  ಸಂಗೀತ ಸೇವೆಯನ್ನು ಗುರುತಿಸಿ ಸಂಸ್ಥೆಯವರು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.