ಡಾಂಬರೀಕರಣ, ಅಂಗನವಾಡಿ ಉದ್ಘಾಟಿಸಿದ: ಶಾಸಕ ಐಹೊಳೆ
Asphalting, Anganwadi inaugurated: MLA Aihole
ರಾಯಬಾಗ, 11 : ರಸ್ತೆಗಳ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಮಂಗಳವಾರ ಪಟ್ಟಣದ ಹನುಮಾನ ಮಂದಿರದಿಂದ ಸಾಯಿನಗರದ (ರಾಯಬಾಗ-ಜಲಾಲಪೂರ ರಸ್ತೆ) ವರೆಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ಜಿ.ಪಂ. ಅನುದಾನದಲ್ಲಿ ತಾಲೂಕಿನ ಬಾವನ ಸೌಂದತ್ತಿ ಮತ್ತು ಸೌಂದತ್ತಿವಾಡಿಗಳಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಗುವಿನ ಕಲಿಕೆಗೆ ಮೊದಲ ಹೆಜ್ಜೆಯಾದ ಅಂಗನವಾಡಿ ಕೇಂದ್ರಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ. ಇಲ್ಲಿನ ಸಿಬ್ಬಂದಿ ಮಗುವಿನ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕೆಂದು ತಿಳಿಸಿದರು.ಪಿಡಬ್ಲ್ಯುಡಿ ಎಇಇ ಆರಿ್ಬ.ಮನುವಡ್ಡರ, ಸಿಡಿಪಿಒ ಭಾರತಿ ಕಾಂಬಳೆ, ಸದಾಶಿವ ಘೋರೆ್ಡ, ಪ.ಪಂ ಅಧ್ಯಕ್ಷ ಅಶೋಕ ಅಂಗಡಿ, ಬಾವನ ಸೌಂದತ್ತಿ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಆಜಾದ ತಾಸಿವಾಲೆ, ಪಿಡಿಒ ಎಸ್.ಎಸ್.ನ್ಯಾಮಗೌಡರ, ತಾತ್ಯಾಸಾಬ ಕಾಟೆ, ಶಾಂತಿನಾಥ ಪಾಟೀಲ, ಅನೀಲ ಹಂಜೆ, ಸತ್ಯಪ್ಪ ಬಿಷ್ಠೆ, ದತ್ತಾ ಜಾಧವ್, ಸುರೇಶ ಮಾಳಿ, ಮಹೇಶ ಕರಮಡಿ, ಅಜೀತ ಖೆಮಲಾಪೂರೆ, ರಂಜಾನ ಮಕಾನದಾರ, ಗೋಪಾಲ ಕೊಚೆರಿ, ಮಾರುತಿ ಬಂತೆ, ಮಜ್ಜಿದ್ ಡಾಂಗೆ, ಜಿಯಾವುಲ್ಲಾ ಮುಲ್ಲಾ, ಯುನಸ್ ಮುಲ್ಲಾ, ಮಹೇಶ ಕುಲಗೂಡೆ, ಭಾರತಿ ಲೋಹಾರ, ಸನ್ಮತಿ ಶೆಟ್ಟಿ, ರಾಕೇಶ ಅವಳೆ, ಸುಭಾಷ ಕಾಂಬಳೆ, ಶ್ರೀಧರ ಮೇಗಲಮನಿ ಸೇರಿ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 