ಬೆಂಗಳೂರಿನ ಕೋಗಿಲೆ ಬಡಾವಣೆಯ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮತ್ರಿಗೆ ಮನವಿ
Appeal to the Chief Minister demanding that houses be allotted to the victims of Bengaluru's Kogile
ಗದಗ 05: ರಾಜ್ಯ ಸರ್ಕಾರ ಪಂಚ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ಬಡವರ ಪರವಾಗಿ ನಮ್ಮ ಸರ್ಕಾರಇದೆಎಂದು ಬೆನ್ನು ತಟ್ಟಿಕೊಳ್ಳುತ್ತಿರುವುದು ಒಂದುಕಡೆ ಆದರೆ ಇನ್ನೂಂದು ಕಡೆ ಬಡವರ ಕನಸಿನ ಮನೆಗಳನ್ನು ಏಕಾಏಕಿಯಾಗಿ ತೆರವುಗೊಳಿಸಿ ನೂರಾರು ಕುಟುಂಬಗಳನ್ನು ಬೀದಿಗೆ ತಂದಿರುವುದನ್ನು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಖಂಡಿಸುತ್ತೇವೆ ಕೊಡಲೇ ಬೆಂಗಳೂರಿನ ಕೋಗಿಲೆ ಬಡಾವಣೆಯ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಗದಗಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಗದಗಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಕೋಗಿಲೆ ಬಡಾವಣೆಯ ನೂರಾರು ಕುಟುಂಬಗಳ ಮನೆಗಳನ್ನು ತೆರವುಗೊಳಿಸಿರುವುದು ಇದು ಬಡವರ ವಿರೋಧಿ ನೀತಿಯಾಗಿದೆ.ರಾಜ್ಯ ಸರ್ಕಾರ ಕೋಗಿಲೆ ಬಡಾವಣೆ ಹತ್ತಿರವಿರುವ ನೂರಾರು ಬಡವರ ಮನೆಗಳನ್ನು ಅನಧಿಕೈತ ಕಟ್ಟಡಗಳು ಎಂದು ನೆಪ್ಪ ಹೇಳಿ ತೆರವುಗೊಳಿಸಿದ್ದಾರೆ. ಸ್ಥಳೀಯ ಪ್ರದೇಶದ ನೂರಾರು ಕುಟುಂಬಗಳು ಕಳೆದ ಹಲವು ದಶಕಗಳಿಂದ ವಾಸವಾಗಿರುವ ಬಗ್ಗೆ ಸಾಕಷ್ಟು ದಾಖಲೆಗಳು ಇವೆ. ಮನುಷ್ಯ ವಾಸವಾಗಲು ಯೋಗ್ಯವಿಲ್ಲದ ಜಾಗೆಗಳಲ್ಲಿ ಸ್ಲಂಜನರು ವಾಸವಾಗಿದ್ದರು ಸಹ ಸರ್ಕಾರ ಸ್ಲಂ ನಿವಾಸಿಗಳ ಮನೆಗಳನ್ನು ಒಡೆದು ಹಾಕಿ ನೂರಾರು ಕುಟುಂಬಗಳನ್ನು ಇವತ್ತು ಬೀದಿ ತಂದಿದ್ದಾರೆ. ರಾಜ್ಯಸರ್ಕಾರದಿಂದ ಲಕ್ಷಾಂತರ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಿದ್ದೇವೆ, ರಾಜ್ಯದಲ್ಲಿ ಯಾರು ಕೂಡಾ ಮನೆ ಇಲ್ಲದೇ ಬೀದಿಯಲ್ಲಿ ಇರಬಾರದೆಂದು ಹೇಳುವ ನಮ್ಮ ಸರ್ಕಾರ ಹಾಗೂ ವಸತಿ ಸಚಿವರುಇವತ್ತು ನೂರಾರು ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಡಂಬಳ, ಸಾಕ್ರುಬಾಯಿ ಗೋಸಾವಿ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಮಂಜುನಾಥ ಶ್ರೀಗಿರಿ, ರಿಜ್ವಾನ ಮುಲ್ಲಾ, ಮೈಮುನ ಬೈರಕದಾರ,ದಾದು ಗೋಸಾವಿ, ಮಹ್ಮದಸಾಬ ಗಡಾದ, ಶಂಕ್ರ್ಪರೋಣದ, ವಿಶಾಲಕ್ಷಿ ಹಿರೇಗೌಡ್ರ, ನಜಮುನಿಸಾ ಮುರಗೋಡ, ಮಲೇಶಪ್ಪ ಕಲಾಲ, ಪ್ರೇಮಾ ಮಣ್ಣವಡರ, ಗೌರಮ್ಮದಾಸರ, ಮೀನಾಕ್ಷಿ ಗೋಸಾವಿ ಹಾಗೂ ನೂರಾರು ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 