ಕಾರ್ಖಾನೆ ವಿರೋಧಿ ಹೋರಾಟ ವಿಧಾನಸೌಧವರೆಗೆ ವಿಸ್ತರಣೆ ಆಗಬೇಕು: ಡಾ. ಬಾಳೆಕುಂದ್ರಿ
Anti-factory protest should be extended to Vidhana Soudha: Dr. Balekundri
ಕೊಪ್ಪಳ 08: ಇಲ್ಲಿನ ನಗರಸಭೆ ಮುಂದೆ 69ನೇ ದಿನದಲ್ಲಿ ಮುಂದುವರೆದ ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ಇಂಡಿಯಾ ಮುಂತಾದ ಕಾರ್ಖಾನೆ ವಿಸ್ತರಣೆ, ಹೊಸ ಸ್ಥಾಪನೆ ವಿರೋಧಿಸಿ ನಡೆದ ಧರಣಿಗೆ ಬೆಂಬಲಿಸಲು ರಾಜ್ಯದ ಖ್ಯಾತ ಹೃದಯರೋಗ ತಜ್ಞ ವೈದ್ಯರಾದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ರವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುವ ಹೋರಾಟಕ್ಕೆ ಬಂಬಲ ನೀಡಿದರು. ಡಾ. ಬಾಳೆಕುಂದ್ರಿಯವರು ಧರಣಿಗೆ ಬೆಂಬಲಿಸಿ ಮಾತನಾಡಿ, ಜೀವ ಉಳಿದಿದೆ ಎಂದರೆ ಗಾಳಿಯನ್ನು ಉಸಿರಾಡುತ್ತಿದ್ದೇವೆ ಎಂದರ್ಥ, ಗಾಳಿ ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ಜೀವ ಹಾರಿ ಹೋಗುತ್ತದೆ.
ಆ ಗಾಳಿ ಮಲಿನವಾದರೆ ಅದನ್ನು ಸೇವಿಸಿದ ಜನರಿಗೆ ನಿಧಾನವಾಗಿ ಸಾವು ಸಂಭವಿಸುತ್ತದೆ. ಇದು ಸಾವಿನ ದಾರಿ ಸಮೀಪ ಮಾಡುತ್ತದೆ. ಶುದ್ಧ ಗಾಳಿ, ಶುದ್ಧ ನೀರು ನಮ್ಮ ಹಕ್ಕು ಎಂದು ಕೇಳಲು ಯಾರ್ಪನ ಅನುಮತಿಯೂ ಬೇಕಾಗಿಲ್ಲ. ಇದನ್ನು ಕಸಿದುಕೊಳ್ಳುವ ಪ್ರಯತ್ನ ಯಾವ ಸರ್ಕಾರವೂ ಮಾಡಬಾರದು. ಜನರು ಸಹಿಸಿಕೊಂಡಿದ್ದಾರೆ ಎಂದರೆ ಸರ್ಕಾರ ಏನು ಬೇಕಾದರೂ ಮಾಡಬಹುದೇ? ಜನ ಪ್ರತಿನಿಧಿಗಳು ಇಲ್ಲಿನ ಜನರ ಆತಂಕವನ್ನು ದೂರ ಮಾಡಿ, ಕಣ್ಣೀರು ಒರೆಸುವುದು ಆದ್ಯ ಕರ್ತವ್ಯವೆಂದು ತಿಳಿಯಬೇಕು. ಲಕ್ಷಗಟ್ಟಲೆ ಜನರ ಆರೋಗ್ಯ ಕೆಡಿಸುವ ಹಕ್ಕು ಯಾವ ಕಾರ್ಖಾನೆಗೂ ಇಲ್ಲ.
ನಾನು ಇಲ್ಲಿನ ಹಳ್ಳಿ ಜನರ ಗೋಳು ಕೇಳಿದ್ದೇನೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲ, ಭೂಮಿ ಕಬಳಿಸಿ, ವಾತಾವರಣ ಹಾಳು ಮಾಡಿದ್ದು ಇದರ ಪುನರುಜ್ಜೀವನ ಯಾರು ಮಾಡಿ ಕೊಡುತ್ತಾರೆ. ಇವರು ಕೆಡಿಸಲಷ್ಟೇ ಇರುವವರೇ? ಈ ಹೋರಾಟ ಇಲ್ಲಿಂದ ವಿಧಾನಸೌಧದವರೆಗೆ ವಿಸ್ತರಣೆ ಆಗಬೇಕು. ಕಾನೂನು ಹೋರಾಟ ಸಾಧ್ಯವಾದರೆ ಯೋಚಿಸಿ, ಅದಕ್ಕೆ ನಾಡಿನ ಖ್ಯಾತನಾಮರನ್ನು ಹೋರಾಟಕ್ಕೆ ಸೇರಿಸುತ್ತೇನೆ, ಗಟ್ಟಿಯಾಗಿ ನಿಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದರು.ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ. ಬಡಿಗೇರ್, ಸಾಹಿತಿ ಎ.ಎಂ. ಮದರಿ, ಸಂಚಾಲಕರುಗಳಾದ ಮಲ್ಲಿಕಾರ್ಜುನ ಬಿ.
ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಶ್ವೇತಾ ಅಕ್ಕಿ, ಜ್ಯೋತಿ ಎಂ. ಗೊಂಡಬಾಳ, ಕೃಷಿ ಬೆಲೆ ಆಯೋಗದ ಸದಸ್ಯರು ಡಿ.ಎಚ್. ಪೂಜಾರ, ಸೌಮ್ಯ ನಾಲ್ವಾಡ, ಶರಣು ಗಡ್ಡಿ, ಎಸ್. ಬಿ. ರಾಜೂರು, ಹನುಮಂತಪ್ಪ ಗೊಂದಿ, ನಿವೃತ್ತ ಪ್ರಾಚಾರ್ಯರು ವಾಯ್.ಬಿ. ಬಂಡಿ, ರವಿ ಕಾಂತನವರ, ಶಾಂತಯ್ಯ ಅಂಗಡಿ, ಬಿ.ಜಿ. ಕರಿಗಾರ, ಚಂದ್ರಗೌಡ ಪಾಟೀಲ್, ಮಹಾದೇವಪ್ಪ ಎಸ್. ಮಾವಿನಮಡು, ಶಿವಪ್ಪ ಜಲ್ಲಿ, ಬಸವರಾಜ ನರೇಗಲ್, ಮಖ್ಬುಲ್ ರಾಯಚೂರು, ಪಾಮಣ್ಣ ಕೆ. ಮಲ್ಲಾಪುರ, ಭೀಮಪ್ಪ ಯಲಬುರ್ಗಾ, ಅಉಭಾನ್ ನೀರಲಗಿ ಮುಂತಾದವರು ಪಾಲ್ಗೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 