ಅನ್ನ ಪರಬ್ರಹ್ಮ ಸ್ವರೂಪ : ನ್ಯಾಯವಾದಿ ಅರವಿಂದ ವ್ಯಾಸ
Anna is the form of Parabrahma: Lawyer Arvind Vyas
ರಬಕವಿ-ಬನಹಟ್ಟಿ 20: ಅನ್ನದ ಕಣಕಣದಲ್ಲೂ ಶಕ್ತಿಯ ಅಂಕುರವಿದೆ. ಶರಣ ಪರಂಪರೆಯಲ್ಲಿ ಕಾಯಕ ದಾಸೋಹಕ್ಕೆ ಆದ್ಯತೆಯಿದೆ. ಇಂದು ದಾಸೋಹ ಪರಂಪರೆ ಮಾಯವಾಗಿದ್ದರೂ ಸೇವಾಮನೋಭಾವನೆ ಹೊಂದಿರುವ ದಾಸೋಹ ಇಂದಿಗೂ ಪಾವಿತ್ರತೆ ಕಾಯ್ದುಕೊಂಡಿದೆ ಎಂಬುದಕ್ಕೆ ನಾಡಿನ ಪ್ರಸಿದ್ಧ ಮಠಗಳು, ದೇಗುಲಗಳಲ್ಲಿ ನಡೆಯುವ ದಾಸೋಹವೇ ಸಾಕ್ಷಿಯಾಗಿದೆ ಎಂದು ಹಿರಿಯ ನ್ಯಾಯವಾದಿ ಅರವಿಂದ ವ್ಯಾಸ ಹೇಳಿದರು.
ರಬಕವಿಯ ದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ಆಯೋಜಿಸಿದ್ದ 35ನೇ ಅನ್ನದಾಸೋಹ ಸೇವೆಗೆ ಚಾಲನೆ ನೀಡಿ ಸಕಲ ಜೀವರಾಶಿಗೂ ಅನ್ನ ಪರಬ್ರಹ್ಮವಾಗಿದ್ದು, ಕಾಯಕಕ್ಕೆ ಅಣಿಯಾಗಲು ಶಕ್ತಿಮೂಲವಾಗಿದ್ದು, ಪ್ರಸಾದ ರೂಪದಲ್ಲಿ ಪ್ರತಿ ಭಕ್ತರಿಗೂ ದಾಸೋಹ ನಡೆಸುವ ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ತಮ್ಮ ನಿಸ್ವಾರ್ಥತೆಯಿಂದ ಇತರರಿಗೂ ಮಾದರಿಯಾಗಿದ್ದಾರೆಂದರು.
ಧನಲಕ್ಷ್ಮೀ ಸಹಕಾರಿ ಸಂಘದ ನೂತನ ಅಧ್ಯಕ್ಷ ಪ್ರಭು ಉಮದಿ, ಅರವಿಂದ ವ್ಯಾಸರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಶಿವಜಾತ ಉಮದಿ, ಶಿವಾನಂದ ದಾಶ್ಯಾಳ, ರೇವಣ್ಣ ಉಮದಿ, ಮಹಾದೇವಯ್ಯಾ ನಂದಯ್ಯಗೋಳ, ಬಸವರಾಜ ತೊರ್ಲಿ, ವಿಜಯಕುಮಾರ ಹಲಕುರ್ಕಿ, ಎಂ.ಎಸ್.ಗಡೆನ್ನವರ, ಭಾರತ ಗ್ಯಾಸ್ ಸಿಬ್ಬಂದಿ ಸೇರಿದಂತೆ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 