ಅಂಜುಮನ್ ಸಂಸ್ಥೆಯ ಸದಸ್ಯರಿಗೆ ಪೋಲಿಸ್ ಠಾಣೆಯಲ್ಲಿ ಸನ್ಮಾನ
Anjuman members felicitated at police station
ಹಾವೇರಿ 31 : ನಗರದ ಅಂಜುಮನ್ ಸಂಸ್ಥೆಯ ಸದಸ್ಯರಿಗೆ ಹಾವೇರಿ ಶಹರ ಪೊಲೀಸ್ ಠಾಣೆಯ ಸಿಪಿಐ ಮೋತಿಲಾಲ ಪವಾರ ಹಾಗೂ ಸಿಬ್ಬಂದಿ ವರ್ಗದವರಿಂದ ನಗರದ ಪೋಲಿಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿಸಿ ಮಾತನಾಡಿದ ಮೋತಿಲಾಲ ಪವಾರ ಅವರು ಅಂಜುಮನ್ ಸಂಸ್ಥೆಯ ಸರ್ವ ಸದಸ್ಯರು ಮೂರು ವರ್ಷಗಳಿಂದ ಉತ್ತಮ ಕಾರ್ಯ ಮಾಡಿದ್ದು,ನಮ್ಮ ಇಲಾಖೆಗೆ ಸಹಕರಿಸಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ತಮ ಕಾರ್ಯ ಕೆಲಸಗಳನ್ನು ಮಾಡುತ್ತಿದ್ದು ಸೌಹಾರ್ದತೆ ಮೂಡಲು ಸಹಕಾರಿಯಾಗುತ್ತಿದ್ದಾರೆ ಎಂದು ಶುಭ ಹಾರೈಸಿದರು .ಈ ಸಂದರ್ಭದಲ್ಲಿಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರಾದ ಇರ್ಫಾನ್ ಖಾನ್ ಪಠಾಣ,ಉಪಾಧ್ಯಕ್ಷರಾದ ಅನವರ್ ಕಡೆಮನಿ, ಚಮನ್ ಶರೀಫ್ ಮುಲ್ಲಾ, ಕಾರ್ಯದರ್ಶಿಯಾದ ಮುಜಫರ್ ಕೊಟ್ಟಿಗೆರಿ, ಸದಸ್ಯರುಗಳಾದ ಜಮೀರ್ ಜಿಗರಿ, ಸಾಧಿಕ್ ಸವಣೂರ, ವಾಷಿಂ ಸನ್ನು ಖಾನನವರ, ಬಾಬುಲಾಲ್ ಬಾಲೇಬಾಯಿ, ಹಜರತ್ ಅಲಿ ತಶಿಲ್ದಾರ್, ಖಮರ್ ಕಲ್ಯಾಣಿ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಸದಸ್ಯರು, ಮುಖಂಡರು ಹಾಗೂ ಶಹರ ಪೋಲಿಸ್ ಠಾಣೆಯ ಕಾರ್ಯವೃಂದದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 