ಹಿರಿಯ ಸಾಹಿತಿ ಶಿವಾನಂದ ಬೆಳಕೂಡರ ಅಮೃತ ಮಹೋತ್ಸವ
Amrit Mahotsav of veteran writer Shivananda Belakuda
ರಾಯಬಾಗ 30: ಒಬ್ಬ ವ್ಯಕ್ತಿ ಜನರ ಚಿತ್ತದಲ್ಲಿ ಅಚ್ಚಳಿಯದೇ ಉಳಿಯಬೇಕಾದರೆ ಅವರ ನಿಚ್ಚಳವಾದ ಕಾರ್ಯಗಳೇ ಸಾಕ್ಷಿ ಎಂದು ಹಾರೂಗೇರಿಯ ಶರಣ ವಾಹಿನಿಯ ಅಧ್ಯಕ್ಷ ಐ.ಆರ್.ಮಠಪತಿ ಹೇಳಿದರು. ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ಆಂಗ್ಲ ಭಾಷೆ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ ಹಾಗೂ ಮೂಡಲ ಅಭಿನಂದನಾ ಗ್ರಂಥದ ಲೋಕಾರೆ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೆಳಕೂಡ ದಂಪತಿಗಳಿಗೆ ಶುಭ ಕೋರಿದರು.
ಜಾನಪದ ತಜ್ಞ ಬಾಲಕೃಷ್ಣ ಜಂಬಗಿಯವರು ಕೃತಿ ಲೋಕಾರೆ್ಣಗೊಳಿಸಿ ಮಾತನಾಡಿ, ಶಿವಾನಂದ ಬೆಳಕೂಡ ಅವರೊಂದಿಗಿನ ತಮ್ಮ ಒಡನಾಟದ ಹಳೆಯ ದಿನಗಳ ಮಧುರ ನೆನಪನ್ನು ಮೆಲಕು ಹಾಕುತ್ತ ಇಂದು ಸಾಹಿತಿ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ, ದಾಂಪತ್ಯದ ಸ್ವರ್ಣ ಮಹೋತ್ಸವ ಹಾಗೂ ಮೂಡಲ ಅಭಿನಂದನಾ ಗ್ರಂಥದ ಲೋಕಾರೆ್ಣ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಅರ್ಥಗರ್ಭಿತವಾಗಿ ನೆರವೇರಿದ್ದು ಬಾಗೆ ನಾಡಿನ ಜನರ ಪ್ರೀತಿ ಹಾಗೂ ಸಾಂಸ್ಕೃತಿಗೆ ಸಾಕ್ಷಿಯಾಗಿದೆ ಎಂದರು. ಬೆಳಗಾವಿಯ ಸಾಹಿತಿ ಕೆ.ಎನ್.ದೊಡಮನಿ, ಗೋಕಾಕದ ಸಾಹಿತಿ ಪ್ರೋ.ಚಂದ್ರಶೇಖರ ಅಕ್ಕಿ, ಮೂಡಲಗಿ ಸಾಹಿತಿ ಬಾಲಶೇಖರ ಬಂದಿಯವರು ಮಾತನಾಡಿ ಶಿವಾನಂದ ಬೆಳಕೂಡ ಅವರು ನಡೆದು ಬಂದ ದಾರಿ, ಬಾಲ್ಯದ ನೆನಪುಗಳು, ಗುರು ಶಿಷ್ಯರೊಂದಿಗಿನ ಸಂಬಂಧದ ಕುರಿತು ವಿವರಿಸಿದರು.
ಅಧ್ಯಕ್ಷತೆಯನ್ನು ಸಾಹಿತಿ ಎಮ್.ಬಿ.ಹೂಗಾರ ವಹಿಸಿದ್ದರು. ಡಾ.ಪಿ.ಜಿ.ಕೆಂಪನ್ನವರ, ಡಾ.ವೈ.ಬಿ.ಹಿಮ್ಮಡಿ, ಶ್ರೀಶೈಲ ಹೊಸುರ, ಅಶೋಕ ಅಂಗಡಿ, ಸಾಗರ ಝೆಂಡೆನ್ನವರ, ಶೋಭಾ ಕುಲಕರ್ಣಿ ಸೇರಿದಂತೆ ಸಾಹಿತಿಗಳು, ಅಭಿಮಾನಿಗಳು, ಅಪಾರ ಶಿಷ್ಯವೃಂದ, ಪಟ್ಟಣದ ನಾಗರಿಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 