ಹಿರಿಯ ಸಾಹಿತಿ ಶಿವಾನಂದ ಬೆಳಕೂಡರ ಅಮೃತ ಮಹೋತ್ಸವ
Amrit Mahotsav of veteran writer Shivananda Belakuda
ರಾಯಬಾಗ 30: ಒಬ್ಬ ವ್ಯಕ್ತಿ ಜನರ ಚಿತ್ತದಲ್ಲಿ ಅಚ್ಚಳಿಯದೇ ಉಳಿಯಬೇಕಾದರೆ ಅವರ ನಿಚ್ಚಳವಾದ ಕಾರ್ಯಗಳೇ ಸಾಕ್ಷಿ ಎಂದು ಹಾರೂಗೇರಿಯ ಶರಣ ವಾಹಿನಿಯ ಅಧ್ಯಕ್ಷ ಐ.ಆರ್.ಮಠಪತಿ ಹೇಳಿದರು. ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ಆಂಗ್ಲ ಭಾಷೆ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ ಹಾಗೂ ಮೂಡಲ ಅಭಿನಂದನಾ ಗ್ರಂಥದ ಲೋಕಾರೆ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೆಳಕೂಡ ದಂಪತಿಗಳಿಗೆ ಶುಭ ಕೋರಿದರು.
ಜಾನಪದ ತಜ್ಞ ಬಾಲಕೃಷ್ಣ ಜಂಬಗಿಯವರು ಕೃತಿ ಲೋಕಾರೆ್ಣಗೊಳಿಸಿ ಮಾತನಾಡಿ, ಶಿವಾನಂದ ಬೆಳಕೂಡ ಅವರೊಂದಿಗಿನ ತಮ್ಮ ಒಡನಾಟದ ಹಳೆಯ ದಿನಗಳ ಮಧುರ ನೆನಪನ್ನು ಮೆಲಕು ಹಾಕುತ್ತ ಇಂದು ಸಾಹಿತಿ ಶಿವಾನಂದ ಬೆಳಕೂಡ ಅವರ ಅಮೃತ ಮಹೋತ್ಸವ, ದಾಂಪತ್ಯದ ಸ್ವರ್ಣ ಮಹೋತ್ಸವ ಹಾಗೂ ಮೂಡಲ ಅಭಿನಂದನಾ ಗ್ರಂಥದ ಲೋಕಾರೆ್ಣ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಅರ್ಥಗರ್ಭಿತವಾಗಿ ನೆರವೇರಿದ್ದು ಬಾಗೆ ನಾಡಿನ ಜನರ ಪ್ರೀತಿ ಹಾಗೂ ಸಾಂಸ್ಕೃತಿಗೆ ಸಾಕ್ಷಿಯಾಗಿದೆ ಎಂದರು. ಬೆಳಗಾವಿಯ ಸಾಹಿತಿ ಕೆ.ಎನ್.ದೊಡಮನಿ, ಗೋಕಾಕದ ಸಾಹಿತಿ ಪ್ರೋ.ಚಂದ್ರಶೇಖರ ಅಕ್ಕಿ, ಮೂಡಲಗಿ ಸಾಹಿತಿ ಬಾಲಶೇಖರ ಬಂದಿಯವರು ಮಾತನಾಡಿ ಶಿವಾನಂದ ಬೆಳಕೂಡ ಅವರು ನಡೆದು ಬಂದ ದಾರಿ, ಬಾಲ್ಯದ ನೆನಪುಗಳು, ಗುರು ಶಿಷ್ಯರೊಂದಿಗಿನ ಸಂಬಂಧದ ಕುರಿತು ವಿವರಿಸಿದರು.
ಅಧ್ಯಕ್ಷತೆಯನ್ನು ಸಾಹಿತಿ ಎಮ್.ಬಿ.ಹೂಗಾರ ವಹಿಸಿದ್ದರು. ಡಾ.ಪಿ.ಜಿ.ಕೆಂಪನ್ನವರ, ಡಾ.ವೈ.ಬಿ.ಹಿಮ್ಮಡಿ, ಶ್ರೀಶೈಲ ಹೊಸುರ, ಅಶೋಕ ಅಂಗಡಿ, ಸಾಗರ ಝೆಂಡೆನ್ನವರ, ಶೋಭಾ ಕುಲಕರ್ಣಿ ಸೇರಿದಂತೆ ಸಾಹಿತಿಗಳು, ಅಭಿಮಾನಿಗಳು, ಅಪಾರ ಶಿಷ್ಯವೃಂದ, ಪಟ್ಟಣದ ನಾಗರಿಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 