ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ Ambigara Choudaiah's birth anniversary celebration

 

ತಾಳಿಕೋಟಿ   21: ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ ನಿಜಶರಣ,ಶ್ರೇಷ್ಠ ವಚನಕಾರರಾದ ಅಂಬಿಗೇರ ಚೌಡಯ್ಯನವರ ದಿನಾಚರಣೆ ಆಚರಿಸಲಾಯಿತು. ಶರಣರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಸಚಿನ.ಎಚ್‌.ಪಾಟೀಲರು ಪೂಜೆ ಸಲ್ಲಿಸಿದರು. ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ.ಕಟ್ಟಿ, ಶಿಕ್ಷಕರುಗಳಾದ ಬಿ.ಆಯ್‌.ಹಿರೇಹೊಳಿ,ಎಸ್‌.ವಿ.ಜಾಮಗೊಂಡಿ, ಎಮ್‌.ಎಸ್‌.ರಾಯಗೊಂಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.