ಮುನೀರ್ ಸಿದ್ದಿಕಿ ಗೆ ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಮುನೀರ್ ಸಿದ್ದಿಕಿ ಗೆ ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ  Ambedkar Sadbhavana National Award to Muneer Siddiqui


ಕೊಪ್ಪಳ 08:  ನಗರದ ಸಮಾಜ ಸೇವಕ ಮುನೀರ್ ಅಹಮದ್ ಸಿದ್ದಿಕಿ ಅವರಿಗೆ ಸುರುವೆ ಕಲ್ಚರರ್ ಅಕಾಡೆಮಿ ವತಿಯಿಂದ ಕೊಡ ಮಾಡುವ ಡಾ, ಬಿ,ಆರ್, ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ,ಇದೆ ದಿನಾಂಕ 11 ರ ರವಿವಾರ ಸಂಜೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ನಯನ ಸಭಾಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಕೊಪ್ಪಳದ ಮುನೀರ್ ಅಹ್ಮದ್ ಸಿದ್ದಿಕಿ ಅವರಿಗೆ ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ, ಮುನೀರ್ ಸಿದ್ದಿಕಿ ಯವರು ಕೊಪ್ಪಳ ತಾಲೂಕ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿರಿಗನ್ನಡ ವೇದಿಕೆ ಗಳಲ್ಲಿ ಕನ್ನಡ ನಾಡು ನುಡಿ ಸೇವೆಗಾಗಿ ಸತತ 15 ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ, ಸದರಿಯವರ ಕನ್ನಡಪರ ಮತ್ತು ಉತ್ತಮ ಸಾಮಾಜಿಕ ಸೇವೆ ಪರಿಗಣಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಇಲ್ಲಿಯ ಹಲವು ಸಂಘಟನೆಗಳು, ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,