ಭಾರತಕ್ಕೆ ಅಗ್ರಸ್ಥಾನ ತಂದು ಕೊಟ್ಟ ನಾಯಕ ಅಂಬೇಡ್ಕರ : ಶಾಸಕ ಸಿದ್ದು ಸವದಿ
Ambedkar, the leader who brought India to the top: MLA Siddu Savadi
ರಬಕವಿ-ಬನಹಟ್ಟಿ 26 : ವಿಶ್ವದ ಏಕೈಕ ದೊಡ್ಡ ಪ್ರಜಾಪ್ರಭುತ್ವದೇಶವಾದ ಭಾರತಕ್ಕೆ ಇಂದು ವಿಶ್ವ ಮಾನ್ಯ ದೊರೆತಿದೆ. ಇದಕ್ಕೆ ಮೂಲ ಕಾರಣವಾಗಿರುವುದು ಅಂಬೇಡ್ಕರ ರವರು ರಚಿಸಿರುವ ಸಂವಿಧಾನ. ಡಾ. ಅಂಬೇಡ್ಕರವರು ಭಾರತಕ್ಕೆ ಅಗ್ರಸ್ಥಾನ ತಂದುಕೊಟ್ಟ ಮಹಾನ ನಾಯಕ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ಎಸ್. ಟಿ. ಸಿ. ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ರಬಕವಿ-ಬನಹಟ್ಟಿಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಭಾರತ ಸಂವಿದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸಚಿವರಾಗಿ ಡಾ. ಅಂಬೇಡ್ಕರವರು ದೇಶದ ಪ್ರಗತಿಯ ಪರವಾಗಿ ಮತ್ತುದೇಶದ ಎಲ್ಲಾ ವರ್ಗದಜನತೆಯ ಕ್ಷೇಮಾಭಿವೃದ್ಧಿಗಾಗಿ ಸಂವಿಧಾನವನ್ನು ರಚಿಸಿದರು. ಆಡಳಿತದ ಒಕ್ಕೂಟದ ವ್ಯವಸ್ಥೆಯಲ್ಲಿದೇಶದಕಟ್ಟಕಡೆಯ ವ್ಯಕ್ತಿಗೂನ್ಯಾಯದೊರೆಯಬೇಕೆಂಬ ಆಶಯ ಸಂವಿಧಾನದಾಗಿದೆ. ವ್ಯಕ್ತಿಗೌರವ, ದೇಶದಏಕತೆಗೆ ಮತ್ತು ಸಮಗ್ರತೆಗೆ ಸಹಕಾರಿಆಗಿದೆಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಗೀರೀಶ ಸ್ವಾದಿ, ಪೌರಾಯುಕ್ತ ರಮೇಶ ಜಾಧವ, ಎಸ್.ಆರ್.ಎ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯಡಾ. ಜಿ.ಆರ್.ಜುನ್ನಾಕರ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಆಲಗೂ, ಡಾ. ಎಂ.ಎಚ್.ಶಿರಹಟ್ಪಿ. ನಗರಯೋಜನಾ ಪ್ರಾಧಿಕಾರಾಧ್ಯಕ್ಷದಾನಪ್ಪ ಹುಲಜತ್ತಿ, ಜಮಖಂಡಿ ಸಮಾಜಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಜಗದೇವ ಪಾಸೋಡಿ,ದಲಿತ ಮುಖಂಡರಾದ ಬಸವರಾಜ ದೊಡಮನಿ, ಬಾಬು ಮಹಾಜನ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 