ಎಲ್ಲ ಮಾನವರು ಸಮಾನತೆಯಿಂದ ಬದುಕಬೇಕು : ಗೋಣೆಣ್ಣನವರ

ಎಲ್ಲ ಮಾನವರು ಸಮಾನತೆಯಿಂದ ಬದುಕಬೇಕು : ಗೋಣೆಣ್ಣನವರ   All human beings should live with equality: Gonennavara

ಎಲ್ಲ ಮಾನವರು ಸಮಾನತೆಯಿಂದ ಬದುಕಬೇಕು : ಗೋಣೆಣ್ಣನವರ   

  ಶಿಗ್ಗಾವಿ 30 : ಪಟ್ಟಣದ ಡಾ: ಬಿ ಆರ್ ಅಂಬೇಡ್ಕರ್ ಸರ್ಕಾರಿ ಕಛೇರಿಗಳ ಸಂಕೀರ್ಣದಲ್ಲಿ ವಿಶ್ವ ಮಾನವ ಕಳ್ಳಸಾಗಣಿಕೆ ವಿರೋಧಿ ದಿನದ ಪ್ರತಿಜ್ಞಾ ವಿಧಿಯನ್ನು ತಹಶೀಲ್ದಾರ  ಯಲ್ಲಪ್ಪ ಗೊಣೆಣ್ಣನವರ ಭೋದಿಸಿ ನಂತರ  ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದ ಅವರು ಸಂವಿಧಾನದ ಪ್ರಕಾರ ಎಲ್ಲ ಮಾನವರು ಸಮಾನತೆಯಿಂದ ಬದುಕಬೇಕು ಹಾಗೂ ಮಹಿಳೆಯ ಮತ್ತು ಮಕ್ಕಳ ರಕ್ಷಣೆ ಮಾಡುವುದು ಸಹ ಮಾನವರ ಮುಖ್ಯ ಕರ್ತವ್ಯವಾಗಿದ್ದು ನಾವು ಎಲ್ಲರೂ ಸಮಾಜದಲ್ಲಿ ಎಲ್ಲ ಮಹಿಳೆ ಮತ್ತು ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಉದ್ದೇಶ ಎಂದರು.  

  ಭಾಕ್ಸ ಸುದ್ದಿ :ನಗರದ ಪ್ರಮುಖ ಬೀದಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆಯರು  ಜಾಥಾ ಕೈಗೊಂಡು  ನಂತರ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯೆಂದು ಘೋಷಣೆಯನ್ನು ಕೂಗುತ್ತಾ ಜಾಥಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.     ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ.ಎ.ಆರ್ ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.