14ರಂದು ಮಹಾಗಣಪತಿ ಮಹೋತ್ಸವದಲ್ಲಿ ಅಘೋರಿ ನಾಗಬಾಬಾ
Aghori Naga Baba at Maha Ganapati Mahotsav on the 14th
14ರಂದು ಮಹಾಗಣಪತಿ ಮಹೋತ್ಸವದಲ್ಲಿ ಅಘೋರಿ ನಾಗಬಾಬಾ
ರಾಣೇಬೆನ್ನೂರು 12: ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಆಯೋಜಿಸಲ್ಪಟ್ಟ "ರಾಣೇಬೆನ್ನೂರ ಕಾ ರಾಜಾ ಮಹಾಗಣಪತಿ ಮಹೋತ್ಸವ" ಕಾರ್ಯಕ್ರಮದ ಅಂಗವಾಗಿ, ಅಘೋರ ಪರಂಪರೆಯ ಪ್ರಸಿದ್ಧ ತಪಸ್ವಿ, ಅಘೋರ ಸದ್ಗುರು ನಾಗಬಾಬಾ ಧನಂಜಯ ಗುರೂಜೀ ಮಹಾರಾಜ್ ಅವರು ದಿನಾಂಕ 14. ಸೆಪ್ಟೆಂಬರ್ 2025 ರಂದು ಭಾನುವಾರ ಸಾಯಂಕಾಲ 6.30 ಗಂಟೆಗೆ, ಮಹಾಗಣಪತಿಯ ಭವ್ಯ ವೇದಿಕೆಯಲ್ಲಿ ತಮ್ಮ ದಿವ್ಯ ಸಾನ್ನಿಧ್ಯವನ್ನು ನೀಡಿ ಸಾರ್ವಜನಿಕರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿದ್ದಾರೆ. ಇವರ ಪಾದಸ್ಪರ್ಶ ಪ್ರಯಾಗರಾಜದಲ್ಲಿ ಅರ್ಘ್ಯ ಅರ್ಿಸಿದಂತೆ ಅತಿ ಪುಣ್ಯಫಲವನ್ನು ನೀಡುತ್ತದೆ ಎಂಬ ನಂಬಿಕೆಯಿಂದ, ಹಾಗೂ ನಮ್ಮ ರಾಣೇಬೆನ್ನೂರು ನಗರದ ಜನತೆಗೆ ಈ ದಿವ್ಯ ಅನುಭವ ಸಿಗಲೆಂಬ ಸದುದ್ದೇಶದಿಂದ, ನಮ್ಮ ವೇದಿಕೆಯು ಅವರನ್ನು ಆತ್ಮೀಯವಾಗಿ ಆಹ್ವಾನಿಸಿದೆ.ಎಲ್ಲ ಭಕ್ತರು ಮತ್ತು ಗಣಪತಿ ಸೇವಕರು ತಮ್ಮ ಕುಟುಂಬ ಸಮೇತರಾಗಿ ಬಂದು ಸದ್ಗುರುಗಳ ಆಶೀರ್ವಾದವನ್ನು ಪಡೆದು ಮಹಾಗಣಪತಿಯ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದುಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 