14ರಂದು ಮಹಾಗಣಪತಿ ಮಹೋತ್ಸವದಲ್ಲಿ ಅಘೋರಿ ನಾಗಬಾಬಾ
Aghori Naga Baba at Maha Ganapati Mahotsav on the 14th
14ರಂದು ಮಹಾಗಣಪತಿ ಮಹೋತ್ಸವದಲ್ಲಿ ಅಘೋರಿ ನಾಗಬಾಬಾ
ರಾಣೇಬೆನ್ನೂರು 12: ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಆಯೋಜಿಸಲ್ಪಟ್ಟ "ರಾಣೇಬೆನ್ನೂರ ಕಾ ರಾಜಾ ಮಹಾಗಣಪತಿ ಮಹೋತ್ಸವ" ಕಾರ್ಯಕ್ರಮದ ಅಂಗವಾಗಿ, ಅಘೋರ ಪರಂಪರೆಯ ಪ್ರಸಿದ್ಧ ತಪಸ್ವಿ, ಅಘೋರ ಸದ್ಗುರು ನಾಗಬಾಬಾ ಧನಂಜಯ ಗುರೂಜೀ ಮಹಾರಾಜ್ ಅವರು ದಿನಾಂಕ 14. ಸೆಪ್ಟೆಂಬರ್ 2025 ರಂದು ಭಾನುವಾರ ಸಾಯಂಕಾಲ 6.30 ಗಂಟೆಗೆ, ಮಹಾಗಣಪತಿಯ ಭವ್ಯ ವೇದಿಕೆಯಲ್ಲಿ ತಮ್ಮ ದಿವ್ಯ ಸಾನ್ನಿಧ್ಯವನ್ನು ನೀಡಿ ಸಾರ್ವಜನಿಕರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿದ್ದಾರೆ. ಇವರ ಪಾದಸ್ಪರ್ಶ ಪ್ರಯಾಗರಾಜದಲ್ಲಿ ಅರ್ಘ್ಯ ಅರ್ಿಸಿದಂತೆ ಅತಿ ಪುಣ್ಯಫಲವನ್ನು ನೀಡುತ್ತದೆ ಎಂಬ ನಂಬಿಕೆಯಿಂದ, ಹಾಗೂ ನಮ್ಮ ರಾಣೇಬೆನ್ನೂರು ನಗರದ ಜನತೆಗೆ ಈ ದಿವ್ಯ ಅನುಭವ ಸಿಗಲೆಂಬ ಸದುದ್ದೇಶದಿಂದ, ನಮ್ಮ ವೇದಿಕೆಯು ಅವರನ್ನು ಆತ್ಮೀಯವಾಗಿ ಆಹ್ವಾನಿಸಿದೆ.ಎಲ್ಲ ಭಕ್ತರು ಮತ್ತು ಗಣಪತಿ ಸೇವಕರು ತಮ್ಮ ಕುಟುಂಬ ಸಮೇತರಾಗಿ ಬಂದು ಸದ್ಗುರುಗಳ ಆಶೀರ್ವಾದವನ್ನು ಪಡೆದು ಮಹಾಗಣಪತಿಯ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದುಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 