ಸಂವಿಧಾನ ಮೌಲ್ಯಗಳನ್ನು ಕಲಿಸುವ ಪಾಠ ಶಾಲೆ: ಚೇಗರೆಡ್ಡಿ

A school that teaches constitutional values: Chegareddy

ಸಂವಿಧಾನ ಮೌಲ್ಯಗಳನ್ನು ಕಲಿಸುವ ಪಾಠ ಶಾಲೆ: ಚೇಗರೆಡ್ಡಿ

ಹಾವೇರಿ 30 : ಸಮಾಜವನ್ನು ಸತ್ಯ ಮತ್ತು ಸಮಾನತೆಯ ಕಡೆಗೆ ಕೊಂಡುಯುವುದೇ ವಿಜ್ಞಾನ. ಭಾರತೀಯ ಜ್ಞಾನ ಪರಂಪರೆಯಲ್ಲಿರುವ ವಿಜ್ಞಾನ ವಿಚಾರಗಳನ್ನು ಇಂದಿಗೆ ಪರಿಷ್ಕರಿಸಿ ಸತ್ಯದ ಹುಡುಕಾಟ ವಿಜ್ಞಾನ ಮಾಡುತ್ತದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಎಫ್ ಸಿ ಚೇಗರೆಡ್ಡಿ ನುಡಿದರು. 

ನಗರ ಹೂರವಲದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಭಾಭವನದಲ್ಲಿ ಜರುಗಿದ ಜಿಲ್ಲಾ ಸಮಿತಿಗಳ ಪುನರ್‌ಚನೆ ಮತ್ತು ಒಂದು ದಿನದ ಅಧ್ಯಯನ ಶಿಬಿರವನ್ನು ಉಧ್ಘಾಟಿಸುತ್ತ ಚೇಗರೆಡ್ಡಿ ನುಡಿದರು.ಅನುಭವಿಗಳು ಇರಬೇಕು, ಯುವಕರು ಸಂಘಟನೆಗೆ ಬರಬೇಕು ಇಲ್ಲದ್ದಿದರೆ ಸಂಘಟನೆಗಳಿಗೆ ಮುಪ್ಪು ಬರುತ್ತದೆ. ಶಿಕ್ಷಣವೆಂದರೆ ಬಿಡುಗಡೆ, ಸಂವಿಧಾನದ ಮೌಲ್ಯಗಳನ್ನು ಕಲಿಸುವ ಪಾಠ ಶಾಲೆ. ಶ್ರೀಮಂತ ಬಡವ ಜಾತಿ ವಿಜಾತಿ ಎನ್ನದೆ ಸಮಾಜದಲ್ಲಿ ಬೆರಿಯುವದನ್ನು ಪ್ರಾಥಮಿಕ ಶಾಲೆಗಳು ಕಲಿಸಿ ಕೊಡುತ್ತವೆ ಎಂದು ಚೇಗರೆಡ್ಡಿ ಹೇಳಿದರು.ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ ಬಸವರಾಜ ವಹಿಸಿ ಜನರತ್ತ ಸಂಘಟನೆಯನ್ನು ಹೇಗೆ ಬೆಳಸಬೇಕು, ಜನರ ಆಶಯಗಳಿಗೆ ಸ್ಪಂದಿಸುವುದು ಹೇಗೆಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಲಿಸಿ ಕೊಡುತ್ತದೆ.  

ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಜ್ಯ ಸಮಿತಿ ಸದಸ್ಯ ಶ್ರೀಮತಿ ರೇಣುಕಾ ಗುಡಿಮನಿ ಅವರು ಮುಂದಿನ 15 ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕಾ ಸಮಿತಿಗಳನ್ನು ರಚನೆ ಮಾಡುವುದೆ ಅಧ್ಯಯನ ಶಿಬಿರದ ಉದ್ದೇಶ ಎಂದರು. ವೇದಿಕೆಯಲ್ಲಿ ಲಿಂಗಯ್ಯಾ ಬಿ ಹಿರೇಮಠ, ಮಾರುತಿ ಶಿಡ್ಲಾಪುರ, ವಾಯ ಬಿ ಆಲದಕಟ್ಟಿ ,ಸತೀಶ ಎಂ ಬಿ, ಮಂಜುನಾಥ ಎಂ ಸಿ, ಆರ್ ಎಸ್ ಪಾಟೀಲ ಇದ್ದರು. 

ಜಿಲ್ಲೆಯ ಬೇರೆ ಬೇರೆ  ತಾಲೂಕಗಳ ಪ್ರತಿನಿಧಿಗಳಾದ ಸರ್ವಶ್ರೀ ನಾಗಪ್ಪಾ ಹೆಗ್ಗೇರಿ, ಕುಸುಮಾವತಿ, ರತ್ನಮ್ಮಾ ಜೋಗಿಹಳ್ಳಿ, ಸಿ ಎನ್ ಲಕ್ಕನಗೌಡ್ರ, ಸುಭಾಸ ಹೂಸಮನಿ, ಮಲ್ಲಪ್ಪ ಕರಿಯಣ್ಣಾನವರ, ಇಂದಿರಾ ಬಾರಂಗಿ, ಜಮೀರ ರಿತ್ತಿ, ಚಂದ್ರಶೇಖರ ಕುಳೆನುರು, ಮಲ್ಲಿಕಾರ್ಜುನ ಅಮರದ, ಸುಭಾಸ ಹೂಸಮನಿ, ರತ್ನಮ್ಮ ಎ ಬಿ, ಶೈಲಜಾ ಎಂ, ಶಿಲಾ ಚಿಕ್ಕಾವತಿ, ಆರ್ ಸಿ ನಂದಿಹಳ್ಳಿ, ಜುಬೇದಾ ನಾಯಕ, ಜ್ಯೋತಿ ಬಶಟ್ಟಿಯವರ, ಶಶಿಕಲಾ ಅಕ್ಕಿ, ಅನಿತಾ ಹರನಗಿರಿ, ಅಕ್ಕಮಾಹಾದೇವಿ ಹಾನಗಲ, ಪ್ರಾಕಾಶ ಗಡಿಯಪ್ಪಗೌಡ್ರ, ಸಲಿಂ ನಾಯಕ, ನಾಗಾರಾಜ ಮತ್ತು ಪೂರ್ಣಮಾ ದಶಮನಿ ಶಿಬಿರದಲ್ಲಿ ಪಾಲಗೊಂಡಿದ್ದರು. ಸತೀಶ ಎಂ ಬಿ ಸ್ವಾಗತಿಸಿದರು ಕೊನೆಯಲ್ಲಿ ಈರಣ್ಣಾ ಬೆಳವಡಿ ವಂದಿದರು.