ಮನನೊಂದು ವ್ಯಕ್ತಿ ನೇಣಿಗೆ ಶರಣು

ಮನನೊಂದು ವ್ಯಕ್ತಿ ನೇಣಿಗೆ ಶರಣು A man of conscience surrendered to the gallows


ಜಮಖಂಡಿ 06: ನಗರದ ರಾಮೇಶ್ವರ ಕಾಲೋನಿಯಲ್ಲಿ ವ್ಯಕ್ತಿಯೊರ್ವನು ಮನೆಯಲ್ಲಿ ಮನನೊಂದು ನೇಣು ಬಿಗ್ಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ರಾಮೇಶ್ವರ ಕಾಲೋನಿ ನಿವಾಸಿಯಾದ ಆನಂದ ಅರವಿಂದ ಬೆಳವಡಿ (36) ನೇಣು ಬಿಗ್ಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಟೇಲರಿಂಗ್ ಕೆಲಸವನ್ನು ಮಾಡುತ್ತಿದ್ದ ಎನ್ನಲಾಗಿದೆ. ರಾಮೇಶ್ವರ ಕಾಲೋನಿ ಸಮುದಾಯ ಭವನದ ಹತ್ತಿರ ಟೇಲರಿಂಗ್ ಕೆಲಸ ಮಾಡಿಕೊಂಡಿದ್ದು. ಕೆಲವು ದಿನಗಳ ಹಿಂದೆ ಸಾಲವನ್ನು ಮಾಡಿಕೊಂಡು ಅದನ್ನು ಮರಳಿ ಹಣವನ್ನು ನೀಡಿದ ಬಳಿಕ ಜೀವನದಲ್ಲಿ ಜುಗುಪ್ಸೆಕೊಂಡು ಹಾಗೂ ಮನನೊಂದು ಸಾರಾಯಿ ಚಟ್ಟಕ್ಕೆ ಅಂಟಿಕೊಂಡದ್ದು. ಟೇಲರಿಂಗ್ ಕೆಲಸ ಮಾಡುವ ಕೆಳ ಮಹಡ್ಡಿಯಲ್ಲಿ ನೇಣು ಬಿಗ್ಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಶಹರ ಪೋಲಿಸ್ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಭೇಟಿ ನೀಡಿ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.