ಕೆ.ಎಸ್‌.ಶರ್ಮಾ ಅವರ 92ನೇ ಜನ್ಮದಿನೋತ್ಸವ

ಕೆ.ಎಸ್‌.ಶರ್ಮಾ ಅವರ 92ನೇ ಜನ್ಮದಿನೋತ್ಸವ 92nd Birthday Celebration of K.S. Sharma

ಕೆ.ಎಸ್‌.ಶರ್ಮಾ ಅವರ 92ನೇ ಜನ್ಮದಿನೋತ್ಸವ  

ಹುಬ್ಬಳ್ಳಿ  16: ಕಾರ್ಮಿಕ ಮುಖಂಡರಾದ, ಹೋರಾಟಗಾರರು, ಖ್ಯಾತ ಸಾಹಿತಿ ಡಾ. ಕೆ.ಎಸ್‌.ಶರ್ಮಾ ಅವರ 92ನೇ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಡಾ. ಕೆ.ಎಸ್‌.ಶರ್ಮಾ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ ಗ್ರಂಥ ಹಾಗೂ ಹಣ್ಣುಗಳನ್ನು ನೀಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಲಾಯಿತು. ಹುತ್ಪೂರ್ವಕವಾಗಿ ಜನ್ಮ ದಿನದ ಶುಭಾಶಯ ಕೋರಿದರು. ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್‌.ಎಂ.ಸಾತ್ಮಾರ, ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ, ಪಾಲಿಕೆ ನಿವೃತ್ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಹಿರಿಯರಾದ ಸುಮಿತ್ರಮ್ಮ, ಹಲವಾರು ಸಂಘಟನೆಗಳ  ಕಾರ್ಮಿಕ  ಮುಖಂಡರು,   ಮುಂತಾದವರು ಇದ್ದರು.