ಗದಗದಲ್ಲಿ 14, 15 ರಂದು ಅಂಬಿಗರ ಚೌಡಯ್ಯ 905ನೇ ಜಯಂತ್ಯೋತ್ಸವ
905th birth anniversary of Ambigar Choudaiya at Gadag on 14th and 15th
ಗದಗದಲ್ಲಿ 14, 15 ರಂದು ಅಂಬಿಗರ ಚೌಡಯ್ಯ 905ನೇ ಜಯಂತ್ಯೋತ್ಸವ
ಗದಗ 03: ಅಂಬಿಗರ ಶರಣ ಸಂಸ್ಕೃತಿ ಉತ್ಸವ ವಚನ ಗ್ರಂಥ ಮಹಾ ರಥೋತ್ಸವ ಜನವರಿ-14 ಮತ್ತು 15 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರ ಅಂಚೆ ಕಂಚಾರಗಟ್ಟಿ ನಡಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಗಂಗಾಮತ ಸಮುದಾಯದ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಅಂಬಿಗರ ಸೇವಾ ಟ್ರಸ್ಘ ಗದಗ ಜಿಲ್ಲಾ ಗೌರವ ಅಧ್ಯಕ್ಷ ಬಿ ಎನ್ ಯರನಾಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗಂಗಾಮತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರೆ್ಡ ಮಾಡುವಂತೆ ಸರಕಾರಕ್ಕೆಆಗ್ರಹಿಸುವುದಾಗಿ ಹೇಳಿದರು.ಜನವರಿ-14 ರ ಮಂಗಳವಾರ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಐಕ್ಯ ಮಂಟಪ ಪೂಜೆ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ,ವಚನ ಕಂಠಪಾಠ ಸ್ಪರ್ಧೆ,ಪ್ರಥಮ ಐತಿಹಾಸಿಕ ಗಂಗಾರತಿ, ಸಾಂಸ್ಕೃತಿಕ ಕಾರ್ಯಕ್ರಮ, ಅಂಬಿಗರ ಚೌಡಯ್ಯ ಜೀವನಾಧಾರಿತ ದೃಶ್ಯಾವಳಿ ಪ್ರದರ್ಶನ ಜರುಗಲಿದೆ.
ಜನವರಿ-15 ರಂದು ಬೆಳಿಗ್ಗೆ ಧರ್ಮಧ್ವಜಾ ರೋಹಣ, ಧರ್ಮಸಭೆ, ನಿಜಶರಣ ಚೌಡಯ್ಯನವರ 905ನೇ ಜಯಂತ್ಯೋತ್ಸವ, ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳ 9ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ವಚನ ಗ್ರಂಥ ಮಹಾ ರತೋತ್ಸವಜರುಗುವುದಾಗಿ ಬಿ ಎನ್ ಯರನಾಳ ತಿಳಿಸಿದರು.
ಪತ್ರಿಕಾ ಗೋಷ್ಠಿ ಸಂದರ್ಭದಲ್ಲಿ ಕಾಶಪ್ಪ ದುರಗಪ್ಪನವರ, ಗುರ್ಪತಿರ್ಲಾಪುರ, ಹರೀಶ ಬಾರಕೇರ, ಸಂಗಮೇಶ ಹಾದಿಮನಿ, ಕಾಶಪ್ಪ ಬಳಗಾನೂರ, ಅಮಿತ ಪೂಜಾರ, ಅಶೋಕ ಶಿಗ್ಲಿ, ಚಂದ್ರಶೇಖರ ಅಂಬಿಗೇರ, ರವಿಕುಮಾರ, ಶಿವಾನಂದ ಬನಹಟ್ಟಿ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 