‘ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪಾಲಕರ ಸಹಕಾರ ಅವಶ್ಯ’
'Parental cooperation is essential for the overall development of students'
ವಿಜಯಪುರ 09: ಮಕ್ಕಳಿಗೆ ಸಂವಹನ ಕಲೆಯನ್ನು, ಪ್ರಶಸ್ತಿ ಪಡೆದವರ ಸಾಧನೆಯನ್ನು ತಿಳಿಸುವುದು ಮತ್ತು ಅವರಿಗೆ ಶಿಕ್ಷಕರು ಪಾಲಕರು ಪ್ರೇರಣೆಯನ್ನು ನೀಡಿ ಸತ್ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೃಷ್ಣಾಜಿ ದಂಪತಿ ಮತ್ತು ಶಂಭು ತುಪ್ಪದ ಕೊಡಮಾಡಿದ ದತ್ತಿ ದಾಸೋಹಿಗಳು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಇವರು ಪುಣ್ಯದ ಕೆಲಸವನ್ನು ಮಾಡಿದ್ದಾರೆಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ಮತ್ತು ಸಮನ್ವಯ ಆಂಗ್ಲ ಮಾಧ್ಯಮಿಕ ಶಾಲೆ ಬ, ವಿಜಯಪುರ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಕ್ಕಳನ್ನು ಹೃದಯ ಶ್ರೀಮಂತರನ್ನಾಗಿ ಬೆಳೆಸುವುದು ಮತ್ತು ಸಂಸ್ಕಾರಗೊಳಿಸುವುದು ಅವಶ್ಯ. ಅಲ್ಲದೇ ಅವರ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಮತ್ತು ಶಿಕ್ಷಕರು ಸಹಕರಿಸಬೇಕು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾತನಾಡಿದರು.
ಪ್ರೊ. ಆಯ್.ಎಸ್.ಕಾಳಪ್ಪನವರು ಮಾತನಾಡಿ ಶೈಕ್ಷಣಿಕ ಗುಣಮಟ್ಟ ಮತ್ತು ಪ್ರಮಾಣ ಮಟ್ಟ ಎತ್ತರಿಸಲು ಈ ಶಾಲೆಯ ಉಪಪ್ರಾಂಶುಪಾಲರಾದ ಎಸ್.ಸಿ.ಬಿರಾದಾರ ಮತ್ತು ಸಿಬ್ಬಂದಿ ವರ್ಗ ಕಾರಣವೆಂದು ಅದಕ್ಕಾಗಿ 1300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದಾರೆಂದು ಹೇಳಿದರು. 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಪ್ರಜ್ವಲ ಪತ್ತಾರ ಮತ್ತು ದ್ವಿತೀಯ ಸ್ಥಾನ ಗಳಿಸಿದ ಅಕ್ಷತಾ ಆಸಂಗಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶ್ಮಿತಾ ರಾಠೋಡ, ಸೋನಾಲಿ ಜಾಧವ, ಪ್ರೀತಿ ರಾಠೋಡ, ದೀಪಕ್ ಪರಮಣ್ಣನವರ ಪ್ರಥಮ ಸ್ಥಾನ, ತೇಜಸ್ವಿನಿ ಹಿಪ್ಪರಗಿ, ರೋಪನಿ ಡೊಮಿನ್, ಪುಷ್ಪಶ್ರೀ ಪಾಟೀಲ, ವೈಶಾಲಿ ರಾಠೋಡ ದ್ವಿತೀಯ ಸ್ಥಾನ ಪಡೆದರು ಇವರಿಗೆ ಬಹುಮಾನ ನೀಡಲಾಯಿತು.
ವಚನಗಾಯನ ವಿದ್ಯಾರ್ಥಿಗಳು ಮಾಡಿದರು. ಸ್ವಾಗತ ಮತ್ತು ಪರಿಚಯ ಡಾ. ವಿ.ಡಿ.ಐಹೊಳ್ಳಿಯವರು ಮಾಡಿದರು. ಎಸ್.ಎನ್.ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಬದಾಮಿ ವಂದಿಸಿದರು. ಕಾರ್ಯಕ್ರಮ ಆರ್.ಎಸ್.ಪಟ್ಟಣಶೆಟ್ಟಿ ನಡೆಸಿದರು. ವಿ.ಸಿ.ನಾಗಠಾಣ, ಬಿ.ಕೆ.ಗೊಟ್ಯಾಳ, ಡಿ.ಬಿ.ಬಜಂತ್ರಿ, ಪ್ರೊ. ಹೂಗಾರ, ಜಗದೀಶ ಮೋಟಗಿ, ಸಂಗು ಹಿಪ್ಪರಗಿ, ಎಸ್.ಬಿ.ದೊಡಮನಿ ದಂಪತಿ, ಮಕ್ಕಳ ಪಾಲಕರು ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 