‘ಟಾಸ್ ಹಾರಿಸಿದವರು cm ಮತ್ತು dcm’
'CM and DCM threw the toss'
ಬೆಳಗಾವಿ: ಕ್ಯಾಪ್ಟನ್ಗಾಗಿ ಟಾಸ್ ಹಾರಿಸಿದವರು ಅವರಿಬ್ಬರೇ, ಹೆಡ್ ಬಿದ್ದಿದೇಯೋ ಟೆಲ್ ಬಿದ್ದಿದೆಯೋ ಅವರನ್ನೇ ಕೇಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಸಿಎಂ ಕುರ್ಚಿ ಕಿತ್ತಾಟದ ಕುರಿತು ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ ''ಕ್ಯಾಪ್ಟನ್ ಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ಟಾಸ್ ಮಾಡಿದ್ದಾರೆ. ಹೈ ಕಮಾಂಡ್ ಅವರಿಗೆ ಏನು ಹೇಳಿದೆ ಎಂದು ಅವರನ್ನೇ ಕೇಳಬೇಕು. ಟಾಸ್ ದೆಹಲಿಯ ಫಿರೋಜ್ ಶಾ ಕೊಟ್ಲಾದ ಮೈದಾನದಲ್ಲಿ ಆಗಿದೆ.ಟಾಸ್ ಮಾಡಿದವರು ಅವರಿಬ್ಬರು, ಹೀಗಿರುವಾಗ ಕ್ಯಾಪ್ಟನ್ ಬದಲಾವಣೆ ಹಾಗೂ ಹಳೇ ಕ್ಯಾಪ್ಟನ್ ಮುಂದುವರೆಯುವ ಕುರಿತು ಅವರನ್ನೇ ಕೇಳಬೇಕು'' ಎಂದರು.
''ಸದ್ಯ ನಾವು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಮತ್ತೆ ಅವರಿಬ್ಬರೂ ಕ್ಯಾಪ್ಟನ್ ಗಾಗಿ ಟಾಸ್ ಮಾಡುವಾಗ ಥರ್ಡ್ ಅಂಪೈರ್ ಇರಲಿಲ್ಲ. ಇಬ್ಬರೇ ಟಾಸ್ ಹಾರಿಸಿದವರು, ಈ ಟಾಸ್ ವಿಚಾರ ಅವರಿಬ್ಬರಿಗೆ ಗೊತ್ತು, ಅವರನ್ನೇ ಕೇಳಬೇಕು'' ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 