‘ಟಾಸ್ ಹಾರಿಸಿದವರು cm ಮತ್ತು dcm’
'CM and DCM threw the toss'
ಬೆಳಗಾವಿ: ಕ್ಯಾಪ್ಟನ್ಗಾಗಿ ಟಾಸ್ ಹಾರಿಸಿದವರು ಅವರಿಬ್ಬರೇ, ಹೆಡ್ ಬಿದ್ದಿದೇಯೋ ಟೆಲ್ ಬಿದ್ದಿದೆಯೋ ಅವರನ್ನೇ ಕೇಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಸಿಎಂ ಕುರ್ಚಿ ಕಿತ್ತಾಟದ ಕುರಿತು ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ ''ಕ್ಯಾಪ್ಟನ್ ಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ಟಾಸ್ ಮಾಡಿದ್ದಾರೆ. ಹೈ ಕಮಾಂಡ್ ಅವರಿಗೆ ಏನು ಹೇಳಿದೆ ಎಂದು ಅವರನ್ನೇ ಕೇಳಬೇಕು. ಟಾಸ್ ದೆಹಲಿಯ ಫಿರೋಜ್ ಶಾ ಕೊಟ್ಲಾದ ಮೈದಾನದಲ್ಲಿ ಆಗಿದೆ.ಟಾಸ್ ಮಾಡಿದವರು ಅವರಿಬ್ಬರು, ಹೀಗಿರುವಾಗ ಕ್ಯಾಪ್ಟನ್ ಬದಲಾವಣೆ ಹಾಗೂ ಹಳೇ ಕ್ಯಾಪ್ಟನ್ ಮುಂದುವರೆಯುವ ಕುರಿತು ಅವರನ್ನೇ ಕೇಳಬೇಕು'' ಎಂದರು.
''ಸದ್ಯ ನಾವು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಮತ್ತೆ ಅವರಿಬ್ಬರೂ ಕ್ಯಾಪ್ಟನ್ ಗಾಗಿ ಟಾಸ್ ಮಾಡುವಾಗ ಥರ್ಡ್ ಅಂಪೈರ್ ಇರಲಿಲ್ಲ. ಇಬ್ಬರೇ ಟಾಸ್ ಹಾರಿಸಿದವರು, ಈ ಟಾಸ್ ವಿಚಾರ ಅವರಿಬ್ಬರಿಗೆ ಗೊತ್ತು, ಅವರನ್ನೇ ಕೇಳಬೇಕು'' ಎಂದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 