’ನನ್ನ ಕಸ, ನನ್ನ ಜವಾಬ್ದಾರಿ’ ಜಾಗೃತಿ ಕಾರ್ಯಕ್ರಮ
'My Garbage, My Responsibility' awareness program
ಕುಕನೂರು 08: ಪಟ್ಟಣ ಪಂಚಾಯತಿ ಕುಕನೂರು ಇವರ ವತಿಯಿಂದ ಪಟ್ಟಣದ ಅನ್ನದಾನೀಶ್ವರ ಮಠದ ಮುಂಬಾಗಲ್ಲಿ ಸೋಮವಾರ ’ಘನತ್ಯಾಜ್ಯಗಳ ನಮೂನೆ ಮತ್ತು ಅವುಗಳ ವಿಂಗಡನೆ’ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಮಠದ ಪೂಜ್ಯ ಮಹಾದೇವ ಸ್ವಾಮೀಜಿ ಮಾತನಾಡಿ, "ಸ್ವಚ್ಛತೆಯೇ ದೇವರ ಸೇವೆ. ನಮ್ಮ ಮನೆಯ ಕಸವನ್ನು ನಾವೇ ವಿಂಗಡಿಸಿ ಕೊಡುವುದು ಪ್ರತಿ ನಾಗರಿಕನ ಆದ್ಯ ಕರ್ತವ್ಯ. ಹಸಿ ಕಸ, ಒಣ ಕಸ, ಸಾನಿಟರಿ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಮನೆಯಲ್ಲೇ 4 ವಿಧವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ಇದರಿಂದ ಪರಿಸರ ಉಳಿಯುತ್ತದೆ, ರೋಗ ರುಜಿನಗಳು ಕಡಿಮೆಯಾಗುತ್ತವೆ" ಎಂದು ಕರೆ ನೀಡಿದರು.
ಪಟ್ಟಣ ಪಂಚಾಯತಿ ಬಸವರಾಜ ಆರಬೆರಳಿನ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ಹಾಗೂ ವಿಂಗಡಿಸದೆ ತ್ಯಾಜ್ಯ ನೀಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಕಸ ವಿಂಗಡಣೆಯ 4 ವಿಧಗಳು - ಹಸಿ ಕಸ, ಒಣ ಕಸ, ಸಾನಿಟರಿ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯಗಳ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಈ ಸಂದರ್ಭದಲ್ಲಿ ಈರಮ್ಮ ಗಾಟಿ, ಚಂದ್ರಕಲಾ ಹಾಲಕೆರೆ, ಶಿಲ್ಪ ಭಜಂತ್ರಿ, ಹುಸೇನ್ ಬಿ, ನಾಗಮ್ಮಮಳಿಗಿ, ಸಂಗಮೇಶ ಕಲ್ಮಠ, ಸಂಗಪ್ಪ ಗುತ್ತಿ, ಶಿವು ಯತ್ನಟ್ಟಿ ಸೇರಿದಂತೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 