ಚಂದನ ವಾಹಿನಿಯಲ್ಲಿ 'ಗಾನ ಚಂದನ'
ಬೆಂಗಳೂರು, ಅ 03: ನಾಡಿನ ಹೆಮ್ಮೆಯ ದೂರದರ್ಶನ ಚಂದನವಾಹಿನಿಯಲ್ಲಿ ಗಾಯನ ಪ್ರತಿಭಾನ್ವೇಷಣೆಯ ವಿನೂತನ ಕಾರ್ಯಕ್ರಮ "ಗಾನ ಚಂದನ" ಪ್ರಾರಂಭವಾಗಿದೆ. ಹೆಸರಾಂತ ನಟ ರಾಘವೇಂದ್ರ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಹಾಡಿ, ಶುಭ ಕೋರಿದರು. ಕರ್ನಾಟಕದ ಪ್ರತಿ ಜಿಲ್ಲೆಗಳ ನೈಜ, ಸಹಜ ಗಾನಪ್ರತಿಭೆಗಳನ್ನು ಹೆಕ್ಕಿ, ಸೂಕ್ತ ಮಾರ್ಗದರ್ಶನಗಳೊಂದಿಗೆ ಗಾಯನಕಲೆಗೆ ಉತ್ತೇಜನ ನೀಡಲಾಗುತ್ತದೆ. ದೂರದರ್ಶನದ ಭವ್ಯವಾದ ಸೆಟ್ ನಲ್ಲಿ, ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಹಾಗೂ ಜನಪ್ರಿಯ ಸಂಗೀತ ನಿದರ್ೆಶಕ -ಸಿನೆಮಾ ಸಾಹಿತಿ ಶ್ರೀ ತ.ಮನೋಹರ್ ರ ಸಮಕ್ಷಮದಲ್ಲಿ, ವಿನೂತನ ಗಾನತಂತ್ರಗಳೊಂದಿಗೆ "ಗಾನ ಚಂದನ" ಎಲ್ಲರ ಮನೆ-ಮನಗಳಿಗೆ ಅಕ್ಟೋಬರ್ 2 ರಿಂದ ತಲುಪುತ್ತಿದೆ. ಕಿರುತೆರೆಯ ಪ್ರತಿಭಾವಂತ ಕಲಾವಿದ ಜೋಡಿ ವಿಕ್ರಂ ಸೂರಿ ಮತ್ತು ನಮಿತಾರ ನಿರೂಪಣೆಯಲ್ಲಿ ರಾತ್ರಿ 8 ರಿಂದ 9ಘಂಟೆಯವರೆಗೆ ಈ ಕಾರ್ಯಕ್ರಮ ಮೂಡಿ ಬರಲಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 