'ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ'

'ಮಕ್ಕಳಲ್ಲಿರುವ  ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ' 'Encourage the latent talent in children'

ಹೂವಿನಹಡಗಲಿ 16:  ಮಕ್ಕಳಲ್ಲಿ ರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ವಿವೇಕಾನಂದ ಎಜುಕೇಶನ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಚಾರ್ಯ ಎಂ.ಎಂ. ಗುರುಬಸವರಾಜ ಹೇಳಿದರು.ತಾಲೂಕಿನ ಹೊಳಗುಂದಿ ಕೌಲೂರು ತಾಯಮ್ಮ ವಿದ್ಯಾಂಜಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ  ವಾರ್ಷಿಕೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಚಾಲನೆ ನೀಡಿ ಮಾತನಾಡಿದರು.

ಭೂದಾನಿ ಕೌಲೂರು ಶಿವಪ್ಪ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಅಂಜಿ ದಡಾರ​ಪ್ಪ, , ಉಪಾಧ್ಯಕ್ಷ ಅಳವುಂಡಿ ಗುರುಬಸವರಾಜ, ಅಖಕ ಸುನೀಲ್, ಎಮ್ ಎಮ್ ಪ್ರಭುಸ್ವಾಮಿ ಶಿಕ್ಷಕರು ಇದ್ದರು.ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.  ಮುಖ್ಯಗುರುಗಳಾದ ಶ್ರೀಮತಿ ಎಂ.ಎಂ. ದೇವಿಕಾ ಪ್ರಭುಸ್ವಾಮಿ ಅವರು ವಾರ್ಷಿಕ ವರದಿ ಮಂಡಿಸಿದರು.