ಲೋಕದರ್ಶನ ವರದಿ
ಕಂಪ್ಲಿ 27: ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪುರಸಭೆ ಸದಸ್ಯರು ಶುಕ್ರವಾರ ವೀಕ್ಷಿಸಿದರು.ಕೆಲ ಪುರಸಭೆ ಸದಸ್ಯರು ಮಾತನಾಡಿ.ಸೋಮಪ್ಪ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದಿಂದ ನಡೆಯತ್ತಲಿದೆ. ಪುರಸಭೆ ಸದಸ್ಯರಿಗೆ ಕೆರೆ ಅಭಿವೃದ್ಧಿ ಕಾಮಗಾರಿಯ ಎಸ್ಟಿಮೇಟ್ ಕಾಪಿ ತೋರಿಸಿಲ್ಲ. ಕಾಮಗಾರಿಯ ವಿವರ ನೀಡಿಲ್ಲ. ಕೂಡಲೇ ಪುರಸಭೆ ಸದಸ್ಯರ ಸಭೆ ಕರೆದು ಸಂಪೂರ್ಣ ಮಾಹಿತಿ ನೀಡುವತನಕ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಲಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕೆರೆ ಅಭಿವೃದ್ಧಿ ಕಾಮಗಾರಿ ಶಾಶ್ವತವಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಆದರೆ, ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ.
ಕೆರೆ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರನ್ನು ಸಾಗಿಸಲು ಕೇವಲ 2ಅಡಿಯ ಸಿಮೆಂಟ್ ಪೈಪು ಹಾಕಿದ್ದಾರೆ. ಈ ಸಿಮೆಂಟ್ ಪೈಪು ಕಳಪೆಯಾಗಿದ್ದು. ಮರಳಿನ ಬದಲಿಗೆ ಕೆರೆಯ ಹೊಂಡನ್ನೆ ಮರಳಾಗಿ ಬಳಸಲಾಗುತ್ತಿದೆ. ಸರಿಯಾಗಿ ಹೂಳು ತೆಗೆದು ಸಮತಟ್ಟು ಮಾಡಲಾಗಿಲ್ಲ ಎಂದರು
ಕೆರೆಯ ವಿಸ್ತೀರ್ಣವನ್ನು ಮತ್ತೊಮ್ಮೆ ಸರ್ವೇಮಾಡಿಸಿ ಗಡಿ ಗುರುತಿಸ ನಂತರ ಅವರಿವರ ಒತ್ತಾಯಕ್ಕೆ ಕೆರೆ ವಿಸ್ತೀರ್ಣದಲ್ಲಿನ ಜಾಗವನ್ನು ಬಿಟ್ಟು ಕೊಡಲಾಗಿದೆ ಎನ್ನುವ ಮಾಹಿತಿಯಿದ್ದು, ಕೆರೆಯ ವಿಸ್ತೀರ್ಣದಲ್ಲಿನ ಒತ್ತುವರಿ ಸಂಪೂರ್ಣ ತೆರವುಗೊಳಿಸಬೇಕು. ಯಾವುದೇ ಕಾರಣಕ್ಕೂ ಕೆರೆ ವಿಸ್ತೀರ್ಣದ ಜಾಗವನ್ನು ಒತ್ತುವರಿಗೆ ಬಿಟ್ಟುಕೊಡಬಾರದು. ಕೂಡಲೇ ಕೆರೆಯ ಮರು ಸವರ್ೇ ಮಾಡಿಸಿ ಒತ್ತುವರಿ ಸಂಪೂರ್ಣ ತೆರವುಗೊಳಿಸುವಂತೆ ಆಗ್ರಹಿಸಿದರು.
ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಿಂದ ಸಾಗಿದ್ದು ಶಾಸಕ ಜೆ.ಎನ್.ಗಣೇಶ್ ಅವರು ಈ ಕುರಿತು ನಿಗಾವಹಿಸಬೇಕು. ಕೆರೆ ಅಭಿವೃದ್ಧಿ ಕಾಮಗಾರಿ ಕುರಿತ ಮಾಹಿತಿ ಪುರಸಭೆಯ ಅಭಿಯಂತರರು ತಮಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ.
ಪುರಸಭೆ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ, ಅಭಿಯಂತರಾಗಲಿ ಪುರಸಭೆ ಸದಸ್ಯರಿಗೆ ಕೆರೆ ಕಾಮಗಾರಿಯ ಸಂಪೂರ್ಣ. ಮಾಹಿತಿ ನೀಡುವತನಕ ಕೆರೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಇಲ್ಲದ್ದಿದ್ದರೆಬೆಂಗಳೂರಿನ ನಗರಾಭಿವೃದ್ದಿ ಇಲಾಖೆಗೆ ದೂರು ನೀಡಿ ಸ್ಥಗಿತಗೊಳಿಸಲಾಗುವುದು ಎಂದು ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ವಿ.ಎಲ್.ಬಾಬು, ಎಂ.ರಾಜೇಶ್, ಎಸ್.ಸುರೇಶ್, ಎಸ್.ರಾಘವೇಂದ್ರ, ಎಸ್.ತುಳಸಿರಾಮಚಂದ್ರ, ಮರೆಣ್ಣ, ಸಣ್ಣ ಹುಲುಗಪ್ಪ, ಮುಖಂಡ ಬಿ.ಲಕ್ಷ್ಮಣ ಸೇರಿ ಅನೇಕರಿದ್ದರು.
8 ಮತ್ತು 9ನೇವಾರ್ಡ್ ವಲಯ ಇದೀಗ ಕೆರೆಯ ಅಭಿವೃದ್ಧಿಗಾಗಿ ತೆರವುಗೊಳಿಸಲಾಗಿದೆ. ಎರಡು ವಾರ್ಡ್ ಗಳ ಜನತೆಯ ಶೌಚಕ್ಕಾಗಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಒದಗಿಸಿಕೊಡುವಂತೆ.ಆಗ್ರಹಿಸಿದರು.