ಮಹಿಳೆಯರಿಗೆ ಬಸವಣ್ಣನವರ ಸ್ತ್ರೀಪರ ಹೋರಾಟದಿಂದ ಸ್ವಾತಂತ್ರ್ಯ ಪ್ರಾಪ್ತಿ’
Women gained freedom through Basavanna's struggle for women's rights.
‘ಮಹಿಳೆಯರಿಗೆ ಬಸವಣ್ಣನವರ ಸ್ತ್ರೀಪರ ಹೋರಾಟದಿಂದ ಸ್ವಾತಂತ್ರ್ಯ ಪ್ರಾಪ್ತಿ’
ಹುಬ್ಬಳ್ಳಿ 03: ಇಡೀ ವಿಶ್ವದ ಮಹಿಳೆಯರಿಗೆ ಶ್ರೀಗುರು ಬಸವಣ್ಣನವರ ಸ್ತ್ರೀಪರ ಹೋರಾಟದ ಕಾರಣದಿಂದಲೇ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಆಧ್ಯಾತ್ಮಿಕ ರಂಗಗಳಲ್ಲಿ ಸ್ವಾತಂತ್ರ ಪ್ರಾಪ್ತವಾಯಿತು ಎಂದು ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ್ ಅಭಿಪ್ರಾಯಪಟ್ಟರು.ಅವರು ನಗರದ ಗೋಕುಲ್ ರಸ್ತೆಯ ವೆಂಕಟಗಿರಿ ಲೇ ಓಟ್ ದಲ್ಲಿ ಲಿಂಗಾಯತ ಧರ್ಮ ಮಹಾಸಭೆಯ ಬಸವಾನುಭವ ಮಂಟಪದಲ್ಲಿ ರವಿವಾರ ಮುಂಜಾನೆ 11ಘಂಟೆಗೆ ಏರಿ್ಡಸಿದ್ದ "ಬಸವ ಪಂಚಮಿ" ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಪಾಲಕರು ಮಕ್ಕಳಿಗೆ ವಚನಗಳನ್ನು ಹೇಳಿಕೊಟ್ಟರೆ ಮಕ್ಕಳು ಕುಟುಂಬಕ್ಕೂ, ಸಮಾಜಕ್ಕೂ ಆಸ್ತಿಯಾಗುತ್ತಾರೆ ಎಂದರುಹಿರಿಯ ಉದ್ಯಮಿ ಬಿ. ಜಿ. ಹೊಸಗೌಡರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ದಲ್ಲಿ ಹುಬ್ಬಳ್ಳಿಯ "ಚನ್ನಬಸವಸಾಗರ ಹೋರಾಟ ಸಮಿತಿ ಮುಖಂಡ ಬಸವರಾಜ್ ಹುಲ್ಲೋಳಿ ಮಾತನಾಡಿ "ಇಷ್ಟಲಿಂಗ ಪೂಜೆಯನ್ನು ಯಾವತ್ತೂ ಲಿಂಗಾಯತ ಧರ್ಮ ಭಾಂಧವರು ಯಾವತ್ತೂ ಮರೆಯಬಾರದು, ಮಕ್ಕಳಿಗೆ ಪೂಜಾ ಸಂಸ್ಕಾರ ಕಲಿಸಬೇಕು"ಎಂದರುಜಾಗತಿಕ ಲಿಂಗಾಯತ ಮಹಾಸಭಾ ಹುಬ್ಬಳ್ಳಿ ಘಟಕದ ಅಧ್ಯಕ್ಷ ಎಸ್. ಬಿ. ಜೋಡಳ್ಳಿ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು.
ಬಿ.ಬಿ. ಲಕ್ಷ್ಮೇಶ್ವರ, ಎಫ್. ಕೆ. ಬಣಕಾರ್, ಬಿಸಿ. ಕೆಲಗೇರಿ, ಡಾ.ಬಸವರಾಜ್ ದೇಸಾಯಿ, ನೀಲಪ್ಪ ಹಿರೇಗುಂಜಾಳ್ ಉಪಸ್ಥಿತರಿದ್ದರುಶ್ರೀಮತಿ ಸುನೀತಾ ಜೋಡಳ್ಳಿ ವಂದನಾರೆ್ಣ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 