ರೈತರ ಸ್ವಂತ ಖರ್ಚಿನಲ್ಲಿ ಅಗೇಣೀ ನದಿಗೆ ನೀರು: ಬಸದೇಶ್ವರ ಏತ ನೀರಾವರಿ ಕಾಲುವೆಗಳಿಗೆ ಮರುಜೀವ
Water brought to Ageni River at farmers' own expense: Basadeshwara lift irrigation canals revived
ಸಂಬರಗಿ 26 : ಗಡಿ ಪ್ರದೇಶದಲ್ಲಿ ಮಳೆ ಕೊರತೆಯಿಂದ ಅಗೇಣೀ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದ್ದರೂ, ರೈತರು ಸ್ವಂತ ಹಣ ಖರ್ಚು ಮಾಡಿ ಬಸದೇಶ್ವರ ಏತ ನೀರಾವರಿ ಯೋಜನೆಯ ಮುಖ್ಯ ಹಾಗೂ ಉಪಕಾಲುವೆಗಳಿಂದ ನೀರನ್ನು ಅಗೇಣೀ ನದಿಗೆ ಹರಿಸುವ ಮೂಲಕ ನದಿಯಲ್ಲಿನ ಬಾಂಧಾರಗಳನ್ನು ತುಂಬಿಸಿದ್ದಾರೆ. ಇದರಿಂದ ಪಾಂಡೆಗಾಂವ, ಖೋಟಾಡಿ, ಖೋತವಾಡಿ, ಶಿರೂರ, ಕಿಳೇಗಾಂವ, ಸಂಬರಗಿ, ನಾಗನೂರ, ಉಗಾರಣಿ, ಇಂಗಳಗಾಂವ, ಮಾಯನಟ್ಟಿ, ಅಭಯಾಳ ಸೇರಿದಂತೆ ಹಲವು ಗ್ರಾಮಗಳ ನೂರಾರು ಎಕರೆ ಕೃಷಿ ಜಮೀನುಗಳ ಬಾವಿಗಳಿಗೆ ನೀರು ಲಭ್ಯವಾಗಿದ್ದು, ರೈತರಿಗೆ ಅನುಕೂಲವಾಗಿದೆ. ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆಯದೆ ರೈತರು ಸ್ವಂತ ಖರ್ಚಿನಲ್ಲಿ ಕಾಲುವೆ ಮೂಲಕ ನೀರು ಹರಿಸಿರುವುದು ಗಮನಾರ್ಹವಾಗಿದೆ. ರೈತ ಸಂಘಟನೆಯ ಮುಖಂಡ ಕಿರಣ್ ಮಿಸಾಳ್ ಮಾತನಾಡಿ, ರೈತರೇ ಹಣ ಖರ್ಚು ಮಾಡಿ ಸಣ್ಣ ಹೊಳೆಯ ಮೂಲಕ ನೀರು ಹರಿಸಿದ್ದರಿಂದ ಅಗೇಣೀ ನದಿಯಲ್ಲಿ ನೀರು ಸಂಗ್ರಹವಾಗಿದೆ ಎಂದು ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 