ವೀರಭದ್ರೇಶ್ವ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ

ವೀರಭದ್ರೇಶ್ವ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ Veerabhadreshwa Temple inauguration, Kalasarohana

ಪಾಲಬಾವಿ 02:  ರಾಯಬಾಗ ತಾಲೂಕು ಪಾಲಬಾವಿ ಗ್ರಾಮದ ಶೇಗುಣಶಿ ತೋಟದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ಕಳಸಾರೋಹಣ, ಲಕ್ಷ ದೀಪೋತ್ಸವ ಹಾಗೂ ಮಹಾತ್ಮರಿಂದ ಸತಂಗ ಸಮ್ಮೇಳನವು ಮೇ 1ರಿಂದ 5 ದಿನಗಳ ವರೆಗೆ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ಜರಗುತ್ತಿದೆ.  

ಸೋಮವಾರ ದಿ.4ರಂದು ಸಂಜೆ 5ಗಂಟೆಗೆ ಶ್ರೀ ಬರಮಲಿಂಗೇಶ್ವರ ದೇವಸ್ಥಾನದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನ ವರೆಗೆ ಸಕಲ ವಿವಿಧ ಕಲಾ ಮೇಳದೊಂದಿಗೆ ವೀರಭದ್ರಶ್ವರ ದೇವರ ಭಾವಚಿತ್ರ ಹಾಗೂ ಕಳಶದ ಭವ್ಯ ಮೆರವಣಿಗೆ ಜರುಗುವುದು. ಶ್ರೀಶೈಲ ಪೀಠದ ಜಗದ್ಗುರು ಡಾ: ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಭತ್ಪಾದರ ಅಮೃತ ಹಸ್ತದಿಂದ ಕಳಸಾರೋಹಣ ಕಾರ್ಯಕ್ರಮವು ನೆರವೇರುವುದು.  

ನಂತರ ಧರ್ಮಸಭೆ ಜರುಗುವುದು ಎಂದು ಗ್ರಾಪಂ ಮಾಜಿ ಸದಸ್ಯ ರಮೇಶ ಮರಡಿ, ದೇವಸ್ಥಾನದ ಮುಖ್ಯಸ್ಥರು ಅಗ್ರಾಣಿ ಶೇಗುಣಶಿ ಪ್ರಕಟಿನಲ್ಲಿ ತಿಳಿಸಿದ್ದಾರೆ.