ಎಂ.ಪಿ. ಪ್ರಕಾಶ್ ಕಂಚಿನ ಪ್ರತಿಮೆ ಅನಾವರಣ: ಸಿದ್ದರಾಮಯ್ಯಗೆ ಭವ್ಯ ಸ್ವಾಗತ

ಎಂ.ಪಿ. ಪ್ರಕಾಶ್ ಕಂಚಿನ ಪ್ರತಿಮೆ ಅನಾವರಣ: ಸಿದ್ದರಾಮಯ್ಯಗೆ ಭವ್ಯ ಸ್ವಾಗತ  Unveiling of M.P. Prakash's bronze statue: Grand welcome for Siddaramaiah

ಹೂವಿನ ಹಡಗಲಿ, ಜು.11: ಪಟ್ಟಣದ ರಂಗಭಾರತಿ ರಂಗಮಂದಿರದ ಬಳಿ ನಿರ್ಮಿಸಲಾದ ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಕಂಚಿನ ಪ್ರತಿಮೆಯನ್ನು ಮಾಜಿ ಮುಖ್ಯಮಂತ್ರಿ  ಅವರು ಶನಿವಾರ ಅನಾವರಣಗೊಳಿಸಿದರು.  

ಹೆಲಿಕಾಪ್ಟರ್ ಮೂಲಕ ಪಟ್ಟಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾತನಾಡಿದರು. ಇದೇ ವೇಳೆ ದಿವಂಗತ ಎಂ.ಪಿ. ಪ್ರಕಾಶ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.  

ಸಿದ್ದರಾಮಯ್ಯ ಅವರ ಆಗಮನದ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಲಿಪ್ಯಾಡ್ ಬಳಿ ಸೇರಿ ಭವ್ಯ ಸ್ವಾಗತ ಕೋರಿದರು.  ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರಂಗಭಾರತಿ ಪದಾಧಿಕಾರಿಗಳು ಹಾಗೂ ಎಂ.ಪಿ. ಪ್ರಕಾಶ್ ಅವರ ಅಭಿಮಾನಿಗಳು ಭಾಗವಹಿಸಿದ್ದರು.