ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ
Today, Mehboob Nagar Citizens' Struggle Committee
ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ
ಗಂಗಾವತಿ 08: ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗಾವತಿಯ ಮೆಹಬೂಬ್ ನಗರದಲ್ಲಿರುವ ಒಟ್ಟು ಮೂರು, ಮಹಿಳೆಯರ ಸಾಮೂಹಿಕ ಶೌಚಾಲಯಗಳನ್ನು ಕೂಡಲೇ ದುರಸ್ಥಿ ಮಾಡಿ, ಉಪಯೋಗಯೋಗ್ಯ ಮಾಡಬೇಕು ಮತ್ತು ಅವುಗಳ ನಿರ್ವಹಣೆ ಸರಿಯಾಗಿ ನಡೆಯಬೇಕು.. ಅದೇ ರೀತಿ ಇತ್ತೀಚಿಗೆ ವಾರ್ಡ್ 7 ರಲ್ಲಿ ಹರಿಯುವ ದುರುಗಮ್ಮ ಹಳ್ಳಕ್ಕೆ 4 ವರ್ಷದ ಮಗು ಬಿದ್ದು ಜೀವ ಕಳೆದುಕೊಂಡಿದೆ.. ಹಳ್ಳದ ರಸ್ತೆಯ ಎರಡು ಕಡೆ ತಡೆ ಗೋಡೆಗಳನ್ನು ನಿರ್ಮಿಸಬೇಕು ಮತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಮನವಿ ಮಾಡಲಾಯಿತು... ಮನವಿ ಸ್ವೀಕರಿಸಿದ ಪೌರಯುಕ್ತರಾದ ವಿರೂಪಾಕ್ಷ ಮೂರ್ತಿ ಸಕಾರಾತ್ಮಕವಾಗಿ ಸ್ಪಂದಿಸಿದರು... ಈ ಸಂದರ್ಭದಲ್ಲಿ ಮೆಹಬೂಬ್ ನಗರ ನಿವಾಸಿ ಮತ್ತು ಯುವ ಮುಖಂಡರಾದ ಮೈನುದ್ದಿನ್, ಖಾಜಾ ಹುಸೇನ್ ಹಾಗೂ ಹೋರಾಟಗಾರರಾದ ಶರಣು ಪಾಟೀಲ್, ಇದ್ದರು...
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 