ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ

ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ  Today, Mehboob Nagar Citizens' Struggle Committee

ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ  

ಗಂಗಾವತಿ 08: ಇಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗಾವತಿಯ ಮೆಹಬೂಬ್ ನಗರದಲ್ಲಿರುವ  ಒಟ್ಟು ಮೂರು, ಮಹಿಳೆಯರ ಸಾಮೂಹಿಕ ಶೌಚಾಲಯಗಳನ್ನು ಕೂಡಲೇ ದುರಸ್ಥಿ ಮಾಡಿ, ಉಪಯೋಗಯೋಗ್ಯ ಮಾಡಬೇಕು ಮತ್ತು ಅವುಗಳ ನಿರ್ವಹಣೆ ಸರಿಯಾಗಿ ನಡೆಯಬೇಕು.. ಅದೇ ರೀತಿ ಇತ್ತೀಚಿಗೆ ವಾರ್ಡ್‌ 7 ರಲ್ಲಿ ಹರಿಯುವ ದುರುಗಮ್ಮ ಹಳ್ಳಕ್ಕೆ  4 ವರ್ಷದ ಮಗು ಬಿದ್ದು ಜೀವ ಕಳೆದುಕೊಂಡಿದೆ.. ಹಳ್ಳದ ರಸ್ತೆಯ ಎರಡು ಕಡೆ ತಡೆ ಗೋಡೆಗಳನ್ನು ನಿರ್ಮಿಸಬೇಕು ಮತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಮನವಿ ಮಾಡಲಾಯಿತು... ಮನವಿ ಸ್ವೀಕರಿಸಿದ ಪೌರಯುಕ್ತರಾದ ವಿರೂಪಾಕ್ಷ ಮೂರ್ತಿ ಸಕಾರಾತ್ಮಕವಾಗಿ  ಸ್ಪಂದಿಸಿದರು... ಈ ಸಂದರ್ಭದಲ್ಲಿ ಮೆಹಬೂಬ್ ನಗರ ನಿವಾಸಿ ಮತ್ತು ಯುವ ಮುಖಂಡರಾದ ಮೈನುದ್ದಿನ್, ಖಾಜಾ  ಹುಸೇನ್ ಹಾಗೂ ಹೋರಾಟಗಾರರಾದ ಶರಣು ಪಾಟೀಲ್,  ಇದ್ದರು...