ಸರ್ಕಾರಿ ಬಾಲಮಂದಿರ ದಿಂದ ಮೂರು ಬಾಲಕಿಯರು ನಾಪತ್ತೆ.
Three girls go missing from a government children's home.
ಸರ್ಕಾರಿ ಬಾಲಮಂದಿರ ದಿಂದ ಮೂರು ಬಾಲಕಿಯರು ನಾಪತ್ತೆ.
ಬಳ್ಳಾರಿ 12 : ನಗರದ ಶಾಂತಿ ದಾಮ ಅವರಣದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ಮೂರು ಬಾಲಕಿಯರು ನಾಪತ್ತೆ ಯಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇದೆ ತಿಂಗಳು ಅಕ್ಟೋಬರ್ 2 ರಂದು ದಸರ ಹಬ್ಬದ ದಿನ ಸರ್ಕಾರಿ ಬಾಲ ಮಂದಿರದಿಂದ ಕೊಟ್ಟೂರಿನ ಬಿಂದೂಶ್ರೀ 16 ವರ್ಷ ಸಂಡೂರಿನ ಜೀವಿತ 17 ವರ್ಷ ಹೊಸಪೇಟೆಯ ಅಶ್ವಿನಿ ಗೌಲಿ 14 ವರ್ಷ ಎಂಬ ಮೂರು ಬಾಲಕಿಯರು ತಮ್ಮ ತಮ್ಮ ಪ್ರೀಯಕರೊಂದಿಗೆಬಾಲ ಮಂದಿರ ದಿಂದ ಪರಾರಿಯಾದ ಘಟನೆ ಜರುಗಿದೆ ಎಂದು ಬಾಲ ಮಂದಿರದ ನಾಗವೇಣಿಯವರಿಂದ ತಿಳಿದು ಬಂದಿದೆ.ಕಳೆದ ನಾಲ್ಕು ತಿಂಗಳಿಂದ ಬಾಲ ಮಂದಿರದಲ್ಲಿದ್ದ ಕೊಟ್ಟೂರಿನ ಬಿಂದೂ ಶ್ರೀ ಎಂಬ ಬಾಲಕಿ ಮನೆಗೆ ತರೆಳಿ ಮತ್ತೆ ಬಾಲ ಮಂದಿರಕ್ಕೆ ಹಿಂದಿರುಗಿ ಬಂದು ಇಬ್ಬರ ಬಾಲಕಿಯರೊಂದಿಗೆ ಪರಾರಿಯಾಗಿದ್ದಾಳೆ ಪರಾರಿಯಾದ ಬಾಲಕಿಗೆ ಸಂಪೂರ್ಣ ಮಂದಿರದ ಬೀಗದ ಕೈ ವಶ ಇತ್ತು ಎಂಬ ಮಾಹಿತಿ ಬಲ್ಲ ಮೂಲಗಳಿಂದ ಸಂಗ್ರಹವಾಗಿದೆ. ಬಾಲಕಿಯರು ಬಾಲಂಮದಿರ ಬಿಡುವಾಗ ಗೇಟ್ ನಿಂದ ತಮ್ಮ ಸ್ನೀಹಿತೆಯರಿಗೆ ಬಾಯ್ ಬಾಯ್ ಎಂದು ತೆರಳದ್ದಾರೆ ಎಂದು ತಿಳಿದು ಬಂದಿದೆ.ಅದರೆ ಬಾಲ ಮಂದಿರದ ವ್ಯವಸ್ಥಾಪಕಿಯಾಗದ ನಾಗವೇಣಿಯವರನ್ನು ಈ ಕುರಿತು ವಿಚಾರಿಸಿದರೆ ಹಿಂದೆ ಇರುವ 6 ಅಡಿ ಗೋಡೆ ಹಾರಿ ಮೂರು ಜನ ಪರಾರಿಯಾಗಿದ್ದಾರೆ ಎಂದು ತಿಳಿಸುತ್ತಿದ್ದಾರೆ.ಈ ಕುರಿತು ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಅಕ್ಟೋಬರ್ 2 ರಂದು ಪ್ರಕರಣ ದಾಖಲಗಿದ್ದು ಇ ಪ್ರಕರಣ ಠಾಣಾಧಿಕಾರಿಗಳಾದ ರಮೇಶ್ ಕುಲರ್ಕಣಿ ಕೈಗೆತ್ತಿಕೊಂಡು ಒಬ್ಬ ಕೊಟ್ಟೂರಿನ ಹಿಂದೂ ಎಂಬ ಬಾಲಕಿಯನ್ನು ಬೆಂಗಳೂರಿನಲ್ಲಿ ಪ್ರೀಯಕರನೊಂದಿಗೆ ಅಥವಾ ಯಾರೋ ಸಹಾಯದಿಂದ ಸೇರಿ ಹಿಡಿದಿದ್ದಾರೆ ಎಂಬ ಮಾಹಿತಿ ಬಾಲ ಮಂದಿರದ ನಾಗವೇಣಿ ಯವರಿಂದ ತಿಳಿದು ಬಂದಿದೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 