ಸರ್ಕಾರಿ ಬಾಲಮಂದಿರ ದಿಂದ ಮೂರು ಬಾಲಕಿಯರು ನಾಪತ್ತೆ.
Three girls go missing from a government children's home.
ಸರ್ಕಾರಿ ಬಾಲಮಂದಿರ ದಿಂದ ಮೂರು ಬಾಲಕಿಯರು ನಾಪತ್ತೆ.
ಬಳ್ಳಾರಿ 12 : ನಗರದ ಶಾಂತಿ ದಾಮ ಅವರಣದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ಮೂರು ಬಾಲಕಿಯರು ನಾಪತ್ತೆ ಯಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇದೆ ತಿಂಗಳು ಅಕ್ಟೋಬರ್ 2 ರಂದು ದಸರ ಹಬ್ಬದ ದಿನ ಸರ್ಕಾರಿ ಬಾಲ ಮಂದಿರದಿಂದ ಕೊಟ್ಟೂರಿನ ಬಿಂದೂಶ್ರೀ 16 ವರ್ಷ ಸಂಡೂರಿನ ಜೀವಿತ 17 ವರ್ಷ ಹೊಸಪೇಟೆಯ ಅಶ್ವಿನಿ ಗೌಲಿ 14 ವರ್ಷ ಎಂಬ ಮೂರು ಬಾಲಕಿಯರು ತಮ್ಮ ತಮ್ಮ ಪ್ರೀಯಕರೊಂದಿಗೆಬಾಲ ಮಂದಿರ ದಿಂದ ಪರಾರಿಯಾದ ಘಟನೆ ಜರುಗಿದೆ ಎಂದು ಬಾಲ ಮಂದಿರದ ನಾಗವೇಣಿಯವರಿಂದ ತಿಳಿದು ಬಂದಿದೆ.ಕಳೆದ ನಾಲ್ಕು ತಿಂಗಳಿಂದ ಬಾಲ ಮಂದಿರದಲ್ಲಿದ್ದ ಕೊಟ್ಟೂರಿನ ಬಿಂದೂ ಶ್ರೀ ಎಂಬ ಬಾಲಕಿ ಮನೆಗೆ ತರೆಳಿ ಮತ್ತೆ ಬಾಲ ಮಂದಿರಕ್ಕೆ ಹಿಂದಿರುಗಿ ಬಂದು ಇಬ್ಬರ ಬಾಲಕಿಯರೊಂದಿಗೆ ಪರಾರಿಯಾಗಿದ್ದಾಳೆ ಪರಾರಿಯಾದ ಬಾಲಕಿಗೆ ಸಂಪೂರ್ಣ ಮಂದಿರದ ಬೀಗದ ಕೈ ವಶ ಇತ್ತು ಎಂಬ ಮಾಹಿತಿ ಬಲ್ಲ ಮೂಲಗಳಿಂದ ಸಂಗ್ರಹವಾಗಿದೆ. ಬಾಲಕಿಯರು ಬಾಲಂಮದಿರ ಬಿಡುವಾಗ ಗೇಟ್ ನಿಂದ ತಮ್ಮ ಸ್ನೀಹಿತೆಯರಿಗೆ ಬಾಯ್ ಬಾಯ್ ಎಂದು ತೆರಳದ್ದಾರೆ ಎಂದು ತಿಳಿದು ಬಂದಿದೆ.ಅದರೆ ಬಾಲ ಮಂದಿರದ ವ್ಯವಸ್ಥಾಪಕಿಯಾಗದ ನಾಗವೇಣಿಯವರನ್ನು ಈ ಕುರಿತು ವಿಚಾರಿಸಿದರೆ ಹಿಂದೆ ಇರುವ 6 ಅಡಿ ಗೋಡೆ ಹಾರಿ ಮೂರು ಜನ ಪರಾರಿಯಾಗಿದ್ದಾರೆ ಎಂದು ತಿಳಿಸುತ್ತಿದ್ದಾರೆ.ಈ ಕುರಿತು ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಅಕ್ಟೋಬರ್ 2 ರಂದು ಪ್ರಕರಣ ದಾಖಲಗಿದ್ದು ಇ ಪ್ರಕರಣ ಠಾಣಾಧಿಕಾರಿಗಳಾದ ರಮೇಶ್ ಕುಲರ್ಕಣಿ ಕೈಗೆತ್ತಿಕೊಂಡು ಒಬ್ಬ ಕೊಟ್ಟೂರಿನ ಹಿಂದೂ ಎಂಬ ಬಾಲಕಿಯನ್ನು ಬೆಂಗಳೂರಿನಲ್ಲಿ ಪ್ರೀಯಕರನೊಂದಿಗೆ ಅಥವಾ ಯಾರೋ ಸಹಾಯದಿಂದ ಸೇರಿ ಹಿಡಿದಿದ್ದಾರೆ ಎಂಬ ಮಾಹಿತಿ ಬಾಲ ಮಂದಿರದ ನಾಗವೇಣಿ ಯವರಿಂದ ತಿಳಿದು ಬಂದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 